Advertisement

Tag: kendasampige

ದೊಡ್‌’ ಅಮ್ಮ, ಚಿಕ್’ ಅಮ್ಮ!:  ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

“ಸಾಮಾನ್ಯವಾಗಿ ‘ಚಿಕನ್ ಪಾಕ್ಸ್’ ಒಮ್ಮೆ ಬಂದ್ರೆ ಮತ್ತೊಮ್ಮೆ ಬರಲ್ಲ ಕಾವ್ಯ. ಇದು ವೈರಲ್ ಜ್ವರ ಅಲ್ವಾ? ಮುಂಚೆ ನನಗೂ, ಅಕ್ಕನಿಗೂ, ಬಾವನಿಗೂ ನಮ್ಮ ನಮ್ಮ ಬಾಲ್ಯದಲ್ಲಿ ಈ ಚಿಕ್ಕ ‘ಅಮ್ಮ’ ಬಂದಿತ್ತು. ನಮ್ಮ ದೇಹಕ್ಕೆ, ನಮ್ಮ ರೋಗ ನಿರೋಧಕ ವ್ಯವಸ್ಥೆಗೆ ಈ ‘ವೈರಸ್’ನ ನೆನಪು ಖಂಡಿತವಾಗಿ ಇರತ್ತೆ. ಈ ವೈರಸ್ ಪುನಃ ಬಂದ್ರೆ, ಯಾವ ರೀತಿ ಅದನ್ನ ಹೊಡೆದು ಉರುಳಿಸಬೇಕು ಎಂಬ ಯುದ್ಧನೀತಿ ಗೊತ್ತಿರೋ ‘ಬಿ ಮತ್ತು ಟಿ ಮೆಮೊರಿ ಸೆಲ್ಸ್’ ಈಗಾಗ್ಲೇ ನಮ್ಮ ದೇಹದಲ್ಲಿ ಇರತ್ವೆ.”
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಆರನೆಯ ಕತೆ

Read More

ಭಿನ್ನ ನೋಟದ ಪ್ರವಾಸ ಕಥನ: ಡಾ. ಪ್ರೇಮಲತ ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

Read More

ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಲೀಲಾಳ ಅಣ್ಣ ಈಗ ಮಧ್ಯ ಪ್ರವೇಶಿಸಿ ಕುಟುಂಬವೆಂಬ ಸಂಸ್ಥೆಯ ‘ಸಹಜತೆ’ಯನ್ನು ಮರಳಿಸುವ ಪ್ರಯತ್ನ ಮಾಡುತ್ತಾನೆ. ಎಲ್ಲದಕ್ಕೂ ತನ್ನ ಅಪ್ಪನೇ ಕಾರಣ ಎಂದು ದೂರುತ್ತಾನೆ. ಸಾಯುವ ಮುನ್ನ ಲೀಲಾ ತನ್ನ ತಾಯಿಯನ್ನು ಕಾಣುವ ಹಂಬಲದಲ್ಲಿ ಕೊರಗುತ್ತಾಳೆ. ಅಪ್ಪ ತಾನು ಮಾಡಿದ ತಪ್ಪಿನ ಅರಿವಾಗಿ ಹುಚ್ಚು ಹಿಡಿದು ಬೀದಿ ಬೀದಿ ಅಲೆಯುತ್ತಾ ಕೊನೆಯ ಉಸಿರೆಳೆಯುತ್ತಾನೆ. ಲೀಲಾಳ ಅಣ್ಣ ಅತ್ತಿಗೆ ಮಕ್ಕಳೆಲ್ಲರೂ ‘ಒಳ್ಳೆಯ’ ಕುಟುಂಬದಲ್ಲಿ ಬದುಕಬೇಕು ಎಂದು ನೀತಿಪಾಠ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂದನೆ ಬರಹ

Read More

ಈ ಜಗ ಸೋಜಿಗ….: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಊರ ಚಾವಡಿಯಲ್ಲೊಂದು ಕೊಳ. ಕೊಳದ ಸನಿಹ ಗಡಿ ಹಾಕಿದಂತೆ ಹರಿವ ಚಂದ್ರಾನದಿ ಮತ್ತು ಕೊಳಲ ರಾಗ ತೆಗೆಯುವ ಸೀಸು ಜಲಧಾರೆ. ಸದಾ ಪ್ರಶಾಂತ ಸನ್ನಿಧಿ. ಅದರ ಸೌಂದರ್ಯಕ್ಕೆ ಮರಳಾಗದೇ ಮರಳಿದವರಿಲ್ಲ. ಗಂಟೆಗೆ ಸಾವಿರ ಸಾವಿರ ಕ್ಯೂಸೆಕ್ಸ್‌ ನೀರನ್ನ ಧರೆಗಿಳಿಸುವ ಭಗೀರಥ, ಸೀಸು ಜಲಧಾರೆ. ೨೪ ಗಂಟೆಯೂ ಬೇಸರಿಸದೆ ಬಸವಳಿಯದೇ ಸುರಿವ ಜಲಧಾರೆ ಎಂದು ಬತ್ತುವುದೆಂದು ಹೋಟೆಲ್‌ ಮಾಲಿಕನಲ್ಲಿ ಕೇಳಿದೆ. ಇಲ್ಲಿಯವರೆಗೆ ಬತ್ತಿದ್ದೇ ಇಲ್ಲವೆಂದ! ಹಿಮ ಟೋಪಿಗಳನ್ನು ಕರಗಿಸುತ್ತಲೇ ಇರುತ್ತದೆ. ಮತ್ತೆ ಮತ್ತೆ ನೀರುಣಿಸುವ ಚಂದ್ರಾ ನದಿಯ ಹಿಮಗಡ್ಡೆಗಳು!
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

Read More

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ