Advertisement

Tag: ಕೆಂಡಸಂಪಿಗೆ

ಕಣಗಾಲ ಮತ್ತು ಕಳ್ಳರು: ಎಸ್. ಗಂಗಾಧರಯ್ಯ ಅನುಭವ ಕಥನ

ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎಂಟನೆಯ ಕಂತು

Read More

“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ, ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೦ನೇ ಬರಹ ನಿಮ್ಮ ಓದಿಗೆ

Read More

ಹಳೆಯ ಪುಟಗಳಿಂದ…” ಸರಣಿಯಲ್ಲಿ ಚನ್ನಕೇಶವ ಬರಹ

“ನೀನಾಸಂ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ರಂಗ ತಾಂತ್ರಿಕ ಸಮಸ್ಯೆಗಳನ್ನು ಬಹಳ ಸಮಾಧಾನವಾಗಿ ನಿಭಾಯಿಸುವ ನಮ್ಮ ಸಮಾಧಾನಿ ಬಂಗಾರಣ್ಣ, ಒಂದು ರೀತಿಯಲ್ಲಿ ‘ಸಕಲಕಲಾವಲ್ಲಭನ್’. ಇವರು ‘ನೀನಾಸಂಗೇ ದೊಡ್ಡವರು’. ಇವರು ಯಾವಯಾವ ವರ್ಷದಲ್ಲಿ ಯಾರುಯಾರು ಏನೇನು ಮಾಡಿದರು ಎಂಬುದನ್ನೆಲ್ಲಾ ಬಲ್ಲ ನಿಧಾನಿ. ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು”
ಹಳೆಯ ಪುಟಗಳು ಸರಣಿಯಲ್ಲಿ ಚನ್ನಕೇಶವ ಬರಹ

Read More

ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಕೊಳದ ಬಕ” ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಬೆಣ್ಣೆಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ