ಏಳು….. ಕೋಡಗ…… ಕೊಡಗು: ಸುಮಾವೀಣಾ ಸರಣಿ
“ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾರನೆಯ ಬರಹ ನಿಮ್ಮ ಓದಿಗೆ
ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಬೇವಿನ್ ಮರ್ದಲ್ಲಿ ಬಾಗ್ಲು ಮಾಡಸ್ತಾರ!: ಎಚ್. ಗೋಪಾಲಕೃಷ್ಣ ಸರಣಿ
ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆಂಟನೆಯ ಕಂತು
ಮಲೆಯ ಮಕ್ಕಳ ಬೇಸಿಗೆ ರಜಾ – ಮಜಾ: ಭವ್ಯ ಟಿ.ಎಸ್. ಸರಣಿ
ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರ ಅಲ್ಜೀರಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಅಲ್ಜೀರಿಯಾದ ಜನರು ಫುಟ್ಬಾಲ್, ವಾಲಿಬಾಲ್ ಕ್ರೀಡೆಗಳ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಾಕ್ಸಿಂಗ್ನಲ್ಲಿ ಸಾಧನೆ ಮೆರೆದಿದ್ದಾರೆ. ಸಾವಿರದೈನೂರು ಮೀಟರ್ಗಳ ಓಟದ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಅಥ್ಲೀಟ್ಗಳ ಸಾಧನೆ ಮೆಚ್ಚುವಂಥದ್ದಾಗಿದೆ. ಹಲವು ಸಲ ಗೆಲುವಿನ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ
‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ
ನಿದ್ದೆ ಮತ್ತು ಚಲನೆ; ಪಯಣ ಹೇಳುವ ಕಥೆ: ರಾಮ್ ಪ್ರಕಾಶ್ ರೈ ಕೆ. ಸರಣಿ
ದೈವ ದರುಶನದ ನಂತರ ಜೇಮ್ಸ್ ತನ್ನ ಪತ್ನಿಯ ಕಾಲಿಗೆ ಮುಲಾಮು ಹಚ್ಚಿ ನೇವೇರಿಸುವ ದೃಶ್ಯ ಬರುತ್ತದೆ. ಅದನ್ನು ಸ್ನಾನ ಮುಗಿಸಿ ಬರುವ ಮಗ ನೋಡುತ್ತಾ ನಿಲ್ಲುತ್ತಾನೆ. ಗಂಡಸರ ತುಕ್ಕು ಹಿಡಿದ ಈಗೋಗಳಿಗೆ ಈ ದೃಶ್ಯ ಚಾಟಿ ಏಟಿನಂತೆ ಕಾಣುತ್ತದೆ. ಮುಂದೆ, ಜೇಮ್ಸ್ ಕಾಣೆಯಾಗಿ ಸುಂದರಂ ಆಗಿ ಬದಲಾದಾಗ, ಬಸ್ಸಿನಲ್ಲಿದ್ದ ಒಂದು ಪರಿವಾರ ಎರ್ನಾಕುಳಮ್ ನತ್ತ ಸಾಗುವ ಗಾಡಿಯ ಹತ್ತಿ ಹೋಗಿ ಬಿಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಸ್ರೀರಾಮ್ನೋಮಿ: ಸುಮಾ ಸತೀಶ್ ಸರಣಿ
ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಓದುತ್ತಿದ್ದಾಗಲೇ ನಾನು ಮೇಷ್ಟ್ರು ಎಂಬ ಸುಳ್ಳಿನ ಕತೆ ಕಟ್ಟಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ
ಅವಳು “ನಿಮ್ಮ ತರಹದವರನ್ನೇ ನಾನು ಕಾಲೇಜಿನಲ್ಲಿ ನೋಡಿದೆ” ಎಂದಾಗ ನಾನು ನಗುತ್ತಾ “ಹೋ.. ಹೋ… ಅವನಾ? ನನ್ನ ತಮ್ಮ, ಅವನನ್ನು ನೋಡಿ ನೀನು ನಾನೇ ಎಂದು ಭಾವಿಸಿದೆಯಾ” ಎಂದು ಹೊಸ ಕಥೆ ಕಟ್ಟಿದೆ. ಆಗ ಅವಳು “ಅದ್ಹೇಗೆ? ನೀವಿಬ್ಬರೂ ಒಂದೇ ಕ್ಲಾಸಲ್ಲಿ ಇರಬೇಕಿತ್ತಲ್ವಾ?” ಎಂದಾಗ “ಹೋ ಹೋ ಅದಾ ಅವನು ಫೇಲ್ ಆಗೀ ಆಗೀ ಹಿಂದಕ್ಕೆ ಉಳಿದುಕೊಂಡ ನಾನು ಪಾಸ್ ಆಗೀ ಆಗೀ ಮುಂದಕ್ಕೆ ಹೋದೆ” ಎಂದೆ. ಅವಳು ನಂಬಿದಳು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ










