Advertisement

ಸರಣಿ

ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಚಾಲೆಂಜ್ ಗೆಲ್ಲೋಕೆ ತಿನ್ನುತ್ತಿದ್ದ ರೋಚಕ ಪ್ರಸಂಗಗಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಮೆಸ್ ಬಿಲ್ ಕೊಡುವುದು ಒಂದೆರಡು ತಿಂಗಳು ತಡವಾಯ್ತು. ಆಗ ಚೆನ್ನಕೇಶವಣ್ಣನ ಸಿಟ್ಟು ನನ್ನ ಮೇಲೆ ತಾರಕಕ್ಕೇರಿತ್ತು. ಈ ವಿಷಯವನ್ನು ಚೆನ್ನಕೇಶನಣ್ಣನ ಮನೆಯವರ ಬಳಿ ಹೇಳಿದೆ. ಆಗ ಅವರು ಅವರ ಬಳಿ ಇದ್ದ ಹಣವನ್ನೇ ಕೊಟ್ಟು ಮೆಸ್ ಬಿಲ್ ಕೊಡು ಎಂದು ತಿಳಿಸಿದ್ದರು. ಹೀಗೆ ಅವರು ಮಾತೃಹೃದಯಿಯಾಗಿದ್ದರು. ಅವರು ಕೋಪ ಮಾಡಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ನಗುಮೊಗದ ಸ್ವಭಾವ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

read more
ಚಿತ್ರಹಿಂಸೆ ಮತ್ತು ಹೆಡ್ ಕುಕ್: ಸುಮಾವೀಣಾ ಸರಣಿ

ಚಿತ್ರಹಿಂಸೆ ಮತ್ತು ಹೆಡ್ ಕುಕ್: ಸುಮಾವೀಣಾ ಸರಣಿ

ಸೀನರಿ ಅಂದರೆ ನಮ್ಮ ಚಿತ್ರವನ್ನು ಇನ್ನೊಮ್ಮೆ ನೋಡುವ ಸೀನ್ ಇರುತ್ತಲೇ ಇರಲಿಲ್ಲ. ಅದೇ ಸೊರಗಿದ ಮರಗಿಡಬಳ್ಳಿ, ಕೊರಕಲು ನದಿ, ಒಂಟಿ ಕಿಟಕಿಯ ಮನೆ, ರೆಕ್ಕೆ ಸುಟ್ಟಂಥ ಹಕ್ಕಿ, ಸೊಟ್ಟ ರಸ್ತೆ ಹೀಗೆ ಒಂದೇ ಎರಡೇ…. ಸ್ಪುರದ್ರೂಪಿ ಮನುಷ್ಯ ಎಂದೂ ನಮ್ಮಿಂದ ರೂಪುಗೊಳ್ಳಲೇ ಇಲ್ಲ ಬಿಡಿ…. ಅಂತೂ ಚಿತ್ರ -ವಿಚಿತ್ರ ಚಿತ್ರಗಳನ್ನು ಬಿಡಿಸುತ್ತಲೇ ಇದ್ದ ನಮಗೆ ಅನಿವಾರ್ಯವಾಗುತ್ತಿದ್ದುದು ಸೈನ್ಸಿನ ಗಿಡದ ಚಿತ್ರಬಿಡಿಸಿ ಭಾಗಗಳನ್ನು ಗುರುತಿಸಿ ಮತ್ತು ಸೋಷಿಯಲ್ ಸೈನ್ಸಿನ ಭಾರತ ಭೂಪಟ ಬಿಡಿಸಿ ಸ್ಥಳ ಗುರುತಿಸಿ ಎನ್ನುವ ಪ್ರಶ್ನೆ. ಸೈನ್ಸಿನ ಪ್ರಶ್ನೆಯನ್ನು ಎದುರಿಸಿ ಮಾರ್ಕ್ಸ್ ತೆಗೆಯುತ್ತಿದ್ದೆವಾದರೂ ಬೇರು, ಕಾಂಡ, ಎಲೆಗಳು ಕೆಂಪು ಇಂಕಿನಲ್ಲಿ ತಿದ್ದುಪಡಿಯಾಗುತ್ತಿದ್ದವು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೇಳನೆಯ ಬರಹ ನಿಮ್ಮ ಓದಿಗೆ

read more
ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಮಗುವಿನ ಮೌನ ಹಸಿವಿನಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಪಾಕ್ ಚೇಯ್ಸಾಮ್ ಅವರ ಕವಿತೆಗಳು ನೇರ ಆಕ್ರಮಣ ಮಾಡುವುದಿಲ್ಲ, ಆದರೆ ವಿಷಯಗಳ ಸುತ್ತ ಸುತ್ತಾಡುತ್ತಾ ಇರುತ್ತವೆ. ಈ ಕಾವ್ಯಾತ್ಮಕ ಸುತ್ತಾಡುವಿಕೆ ಅನಿವಾರ್ಯವಾಗಿ ಅಂತರವನ್ನು ಸೃಷ್ಟಿಸುತ್ತದೆ, ಇದು ಪ್ರಿಯತಮೆಗಾಗಿ ಹಂಬಲದಂತಹ ಅನ್ಯೋನ್ಯ ವಿಷಯದ ಬಗ್ಗೆಯೂ ಸಹ ಕವಿತೆಗಳು ಮಾತನಾಡುವದರಿಂದ ಬೇರ್ಪಡುವಿಕೆಯ ನೋವನ್ನು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ದಕ್ಷಿಣ ಕೊರೆಯಾ ದೇಶದ ಹೆಸರಾಂತ ಕವಿ ಪಾಕ್ ಚೇಯ್ಸಾಮ್ -ರವರ
(Pak Chaesam, 1933-1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

read more
ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಕೋಟಿಕೋಟಿ ಕೈಜಾರಿದ ದುಃಖ…: ಎಚ್.ಗೋಪಾಲಕೃಷ್ಣ ಸರಣಿ

ಇಡೀ ಬೆಂಗಳೂರಿನ ಉಳ್ಳವರು ಅಂದರೆ ರಿಚ್ ಜನ ಇವರ ಮೋಡಿಗೆ ಒಳಗಾದರು. ಇಡೀ ಬೆಂಗಳೂರು ಒಂದು ರೀತಿಯ ಸಾಮೂಹಿಕ ಸನ್ನಿಗೆ ಒಳಗಾಯಿತು, ಐದು ಹತ್ತು ವರ್ಷ ಹಿಂದೆ ಮನೆ ಕಟ್ಟಿಸಿದವರೂ ಕೊಂಡವರೂ ಸೇರಿದಹಾಗೆ ಹಲವು ತಲೆಮಾರುಗಳಿಂದ ಇದ್ದ ಮನೆಗಳು ನೆಲಸಮ ಆದವು. ವಾಸ್ತು ಸರಿ ಇಲ್ಲ ಎಂದು ವಾಸ್ತು ಶಿಲ್ಪಿ ಹೇಳುವುದು ಮತ್ತು ಅಂತಹ ತಜ್ಞರ ಸಲಹೆ ಮೇರೆಗೆ ಮನೆ ಕೆಡವಿ ಕಟ್ಟುವ ಆಟ ಸುಮಾರು ಎರಡು ದಶಕ ನಡೆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೊಂಭತ್ತನೆಯ ಕಂತು

read more
ಮುದ ತುಂಬಿದ ಮಲೆನಾಡಿನ ಮದ್ವೆಮನೆ:‌ ಭವ್ಯ ಟಿ.ಎಸ್. ಸರಣಿ

ಮುದ ತುಂಬಿದ ಮಲೆನಾಡಿನ ಮದ್ವೆಮನೆ:‌ ಭವ್ಯ ಟಿ.ಎಸ್. ಸರಣಿ

ಗಂಡು ಮತ್ತು ಹೆಣ್ಣಿನ ಮನೆಯ ಒಂದು ಗೋಡೆಯ ಮೇಲೆ ಹಸೆ ಕಲಾವಿದರು ಚಿತ್ತಾರ ಬಿಡಿಸಿ ಗಂಡು ಮತ್ತು ಹೆಣ್ಣಿನ ಹೆಸರು ಬರೆದಿರುತ್ತಾರೆ. ಇದನ್ನು ಹಸೆಗೋಡೆ ಎನ್ನುತ್ತಾರೆ. ಚಪ್ಪರದ ದಿನ, ಮದುವೆ ಮಂಟಪಕ್ಕೆ ಹೊರಡಿಸುವ ಮೊದಲು, ಮದುವೆಯ ನಂತರ ಮದುಮಕ್ಕಳನ್ನು ಈ ಗೋಡೆಯ ಕೆಳಗೆ ಕೂರಿಸಿ ಬಂಧುಗಳೆಲ್ಲರೂ ಅಕ್ಷತೆ ಹಾಕಿ ಹರಸುತ್ತಾರೆ. ಈ ಹಸೆ ಚಿತ್ತಾರವು ಮದುವೆಯ ಸವಿನೆನಪಾಗಿ ಶಾಶ್ವತವಾಗಿ ಆ ಮನೆಯ ಗೋಡೆಯ ಮೇಲೆ ಉಳಿದಿರುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

read more
ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಈ ದೇಶದಲ್ಲಿ ತೀವ್ರವಾದ ಬಡತನವಿದೆ. ಯುವಜನತೆ ಹೆಚ್ಚಿರುವ ದೇಶವಾದ ಕಾರಣ ಜನಸಂಖ್ಯೆ ಈಚೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಗಿನಿಯಾ ದೇಶವು ಅರಣ್ಯ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಗಿನಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

read more
ನನ್ನ ಯಶೋಧೆ ನಾಗಮ್ಮ: ಸುಮಾ ಸತೀಶ್ ಸರಣಿ

ನನ್ನ ಯಶೋಧೆ ನಾಗಮ್ಮ: ಸುಮಾ ಸತೀಶ್ ಸರಣಿ

ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ‌ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ

read more
ಚಂದ್ರಮ್ಮನ್ನ ಹುಯ್ಯೋದು: ಸುಮಾ ಸತೀಶ್ ಸರಣಿ

ಚಂದ್ರಮ್ಮನ್ನ ಹುಯ್ಯೋದು: ಸುಮಾ ಸತೀಶ್ ಸರಣಿ

ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

read more
‘ಮೀಸೆಯ ಮಹಿಮೆ’ ಎಂಬ ವಿಷಯದ ಬಗ್ಗೆ ನಾನೇಕೆ ಬರೆದೆ?!: ಬಸವನಗೌಡ ಹೆಬ್ಬಳಗೆರೆ ಸರಣಿ

‘ಮೀಸೆಯ ಮಹಿಮೆ’ ಎಂಬ ವಿಷಯದ ಬಗ್ಗೆ ನಾನೇಕೆ ಬರೆದೆ?!: ಬಸವನಗೌಡ ಹೆಬ್ಬಳಗೆರೆ ಸರಣಿ

ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್‌ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ