ಇದು ನಿಮ್ದೇ ಸೈಟು ತಾನೇ!: ಎಚ್. ಗೋಪಾಲಕೃಷ್ಣ ಸರಣಿ
ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ
ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಗುರುತರ ಗುರಿಯೆಡೆಗೆ ಓಡಲಿ ಜಮೈಕಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಲಿಂಗಾಯತರು ಮತ್ತು ಲಿಂಗಾಯತ: ರಂಜಾನ್ ದರ್ಗಾ ಸರಣಿ
ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಸ್ಫೋಟಕ್ಕೆ ಬಲಿಯಾದ ಬದುಕು..: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ
ವ್ಯಕ್ತಿತ್ವಗಳ ಮುಖವಾಡ ಕಳಚುವ ಅವಳ ಕಣ್ಣಿನ ಕಥೆ: ರಾಮ್ಪ್ರಕಾಶ್ ರೈ ಸರಣಿ
ಇಲ್ಲಿ ಕ್ರೈಮ್ ಇದ್ದರೂ, ಅನ್ಯಾಯವಿದ್ದರೂ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಯುಕ್ತಿಯೊಂದರ ಶಕ್ತಿಯಿಂದ ಆರಕ್ಷಕರು, ಕ್ರಮಬದ್ಧ ತನಿಖೆ ಎಲ್ಲವ ಮೀರಿಸಿ ಬೇಧಿಸುವ ಹಾದಿಯೇ ಬಲು ರೋಮಾಂಚಕ. ಕಥನ ಕಟ್ಟುವಿಕೆಯೂ ಈ ದಾರಿಗೆ ಹಾದಿಗಲ್ಲಿನಂತೆ ಪೂರಕವಾಗಿಯೇ ಇದೆ. ಅದು ಮಾತ್ರವಲ್ಲದೆ, ಪ್ರಿಯಾಳನ್ನು ಸೂಪರ್ ಹ್ಯೂಮನ್ ಎಂದೋ, ಅತಿಮಾನುಷ ಶಕ್ತಿ ಉಳ್ಳವಳು ಎಂಬಂತೆ ಬಿಂಬಿಸದೆ ಸಾಮಾನ್ಯ ಮಹಿಳೆಯೊಬ್ಬಳಂತೆ ತೋರಿಸಿದ್ದು, ಕಥನಕ್ಕೆ ಪ್ರಾಮಾಣಿಕ ಸ್ಪರ್ಶವನ್ನು ನೀಡಿದೆ ಮತ್ತು ಅದು ತೀರಾ ನೈಜವಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಮಂತ್ರುಕ್ಕೆ ಮಾವಿನ್ ಕಾಯೂ ಉದುರ್ತೈತೆ: ಸುಮಾ ಸತೀಶ್ ಸರಣಿ
ಊಟ ಸೇರ್ದಿದ್ರೆ, ಉಸಾರು ತಪ್ಪೀರೆ ದಿಷ್ಟಿ ಮಂತ್ರ ಹಾಕೋರು. ಇದ್ರಾಗೆ ನಾಕು ತರ. ಸೆರಗು ನಿವಾಳ್ಸಿಕಂತಾ ಮಂತ್ರ ಹಾಕೋದು ಒಂದು ರಕಮಾದ್ರೆ, ಇಬೂತಿ(ವಿಭೂತಿ), ಸಕ್ಕರೆ, ಉಪ್ಪು ಮಂತ್ರಿಸಿ ಕೊಡೋದು ಬ್ಯಾರೆ ರಕಮುಗ್ಳು. ಅವ್ರೇ ಬಂದ್ರೆ ಸೆರಗು ನಿವಾಳ್ಸಿ ಮಂತ್ರ ಹಾಕೋರು. ಅವುರ್ ಬದ್ಲಿ ಬ್ಯಾರೆಯೋರ್ ಬಂದ್ರೆ ಉಪ್ಪೋ ಸಕ್ಕರೇನೋ ಮಂತ್ರಿಸಿ ಊಟದಾಗೆ ಕಲ್ಸಿ ಕೊಡೋಕೆ ಹೇಳೋರು. ಇಬೂತಿ ಆದ್ರೆ ಹಣೆ ಮ್ಯಾಗೆ ಹಚ್ಚೋಕೆ ಹೇಳೋರು. ಮಂತ್ರ ಬಿದ್ದ ಮ್ಯಾಕೆ ಊಟ ತಿಂಡಿ ಸರ್ಯಾಗಿ ಸೇರೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಲೇಖಕರ ಅಜ್ಜಿ-ಅಜ್ಜಂದಿರು ಹಾಕುತ್ತಿದ್ದ ಅಂತ್ರ-ಮಂತ್ರಗಳ ಕುರಿತ ಬರಹ ನಿಮ್ಮ ಓದಿಗೆ
ಜೀವಶಾಸ್ತ್ರದಲ್ಲಿ ಸ್ಕೋರ್ ಮಾಡಿಸಿದ ಕೈಬೆರಳ ತಂತ್ರ!! ಬಸವನಗೌಡ ಹೆಬ್ಬಳಗೆರೆ ಸರಣಿ
ಊರಲ್ಲಿ ಫಲಿತಾಂಶ ಕೇಳಿ ಏನೂ ಹೇಳಲಿಲ್ಲ. “ವಿಜ್ಞಾನವೆಂದರೆ ಕಷ್ಟ; ಅಂತಾದ್ರಲ್ಲಿ ನೀನು ಇಷ್ಟಾದ್ರೂ ತೆಗೆದೆಯಲ್ಲಾ ಅಂತಾ ಖುಷಿ ಪಟ್ಟರು”! ಅವರು ನನ್ನ ಫಲಿತಾಂಶದಲ್ಲಿ ಬೇಸರ ಪಟ್ಟುಕೊಳ್ಳದಿರಲು ಇನ್ನೊಂದು ಕಾರಣವಿದೆ. ಅವರಿಗೆ ನನ್ನ ಹಾಸ್ಟೆಲ್ ಹುಡುಗರ ಫಲಿತಾಂಶ ಹೇಳಿದ್ದು. ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ಸೆಕಂಡ್ ಪಿಯುಸಿಯ 24 ವಿದ್ಯಾರ್ಥಿಗಳ ಪೈಕಿ ಪಾಸ್ ಆಗಿದ್ದು ಇಬ್ಬರೇ!! ಅದು ನಾನು ಮತ್ತು ಲಿಂಗರಾಜ ಮಾತ್ರ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಉಸಿರೇ….. ಉಸಿರು……: ಸುಮಾವೀಣಾ ಸರಣಿ
‘ಉಸಿರಿ’ನ ಹೇಳಿಕೆ ಇಲ್ಲಿಗೆ ಮುಗಿಯಲಿಲ್ಲ, ಇನ್ನೂ ಇದೆ. ‘ಉಸಿರು’ ಈ ಪದದ ಅಕ್ಷರಗಳನ್ನು ಕೊಂಚ ಅದಲು-ಬದಲು ಮಾಡಿದರೆ‘ಉರು(ಸು)ಸ್’ ಆಗುತ್ತದೆ. ಅಂದರೆ ಮುಸಲ್ಮಾನರ ಧಾರ್ಮಿಕ ಆಚರಣೆ ಎಂದಾಗುತ್ತದೆ. ಇನ್ನೂ ಉಸಿರಿನ ಅಕ್ಷರಗಳನ್ನು ಅದಲು ಬದಲು ಮಾಡುತ್ತೇವೆ ಎಂದರೆ ‘ಉರಿಸು’ ಎಂದಾಗುತ್ತದೆ. “ಮನೆಮನೆಯಲ್ಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?’’ ಎಂಬ ಜಿ.ಎಸ್. ಎಸ್ ಅವರ ಕವನದ ಸಾಲುಗಳು ನೆನಪಾಗದೆ ಇರುತ್ತವೆಯೇ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹನ್ನೊಂದನೆಯ ಬರಹ ನಿಮ್ಮ ಓದಿಗೆ










