Advertisement

ಸಾಹಿತ್ಯ

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಸಹಜೀವನ”

ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಸಹಜೀವನ”

read more
ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಪ್ರಶಾಂತ್ ಬೆಳತೂರು ಬರೆದ ಈ ಭಾನುವಾರದ ಕತೆ

ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!”

read more
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ

ಹಸಿದ ಹೊಟ್ಟೆಗಳನ್ನು ಹೊತ್ತುಕೊಂಡು ಪಕ್ಕೂ ಮಾಡಿದ ರೇಜಿಗೆಯಿಂದ ದಿಗಿಲುಗೊಂಡವರು ಫುಟ್‌ಪಾತಿನ ಮೇಲೆ ಕೂರುತ್ತಿದ್ದಂತೆ ತಾವು ತಂದಿದ್ದ ರೊಟ್ಟಿ ಗಂಟುಗಳನ್ನು ಬಿಚ್ಚಿ ತಿನ್ನತೊಡಗಿದರು. ದಾಜಿ ಧೋಂಡಿಬಾನ ಅಂಗಡಿ ಪಕ್ಕದ ಮನೆಯಿಂದ ನೀರಿನ ವ್ಯವಸ್ಥೆ ಮಾಡಿದ. ಒಂದಿಷ್ಟು ಗಂಡಸರು ಊಟ ಒಲ್ಲದೆ ಸಿಗರೇಟು, ಎಲೆ ಅಡಿಕೆ ತಂಬಾಕುಗಳ ತಲುಬಿಗೆ ಶರಣೆಂದರು. ಸಣ್ಣ ಮಕ್ಕಳು ತಮ್ಮ ಅವ್ವ ಅಪ್ಪಂದಿರರಿಂದ ದುಡ್ಡು ಇಸಿದುಕೊಂಡು ಭೈಯ್ಯಾನ ಸ್ವೀಟ್ ದುಕಾನಿನಿಂದ ಸೇವು, ಉಂಡಿ, ಮೈಸೂರ ಪಾಕ್, ಭಜಿ, ಮೊದಲಾದ ತಿಂಡಿಗಳನ್ನು ಖರೀದಿಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಂಜುನಾಥ ಪವಡಿ ಕತೆ “ಒಂದು ಪಯಣ ಪ್ರಸಂಗ”

read more
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

ಮಗುವಿಗೆ ಒಂದು ವರ್ಷ ತುಂಬಿದಾಗ ಮಾತನಾಡಲು ಶುರುಮಾಡಿತು. ಅವಳು ತನ್ನ ಮಗು ಅಮ್ಮ ಎನ್ನಲಿ ಎಂದು ಕಾಯುತ್ತಿದ್ದಳು. ಆದರೆ ಅದು “ಓನ್ಯಾಸಿ” ಎನ್ನತೊಡಗಿತು. ಇದ್ಯಾವ ಶಬ್ದ, ಭಾಷೆ ಎಂದು ಅವಳಿಗೆ ತಕ್ಷಣ ಹೊಳೆಯಲಿಲ್ಲ. ತನ್ನ ನೆನಪುಗಳನ್ನು ಹರವಿ ಪರಿಶೀಲಿಸಿದಾಗ ಅದು ರಾಜೀವ್ 747 ಅವಳಿಗೆ ಹೇಳಿದ ಮೊದಲ ಪದವಾಗಿತ್ತು. ನಾನೇ ಹೆತ್ತು ಹೊತ್ತು ಸಾಕಿದರೂ ಅವನ ಭಾಷೆ ಮಾತನಾಡುತ್ತಿದೆಯಲ್ಲ ಎಂದು ಅವಳಿಗೆ ದುಃಖವಾಯಿತು, ಸಿಟ್ಟೂ ಬಂತು.
ಅಶೋಕ ತಾರದಾಳೆ ಬರೆದ ಈ ಭಾನುವಾರದ ಕತೆ “ಓನ್ಯಾಸಿ”

read more
ಸಂಜೋತಾ ಪುರೋಹಿತ್ ಅನುವಾದಿಸಿದ ರಾಬರ್ಟ್‌ ಬಾರ್ರ್ ಕತೆ

ಸಂಜೋತಾ ಪುರೋಹಿತ್ ಅನುವಾದಿಸಿದ ರಾಬರ್ಟ್‌ ಬಾರ್ರ್ ಕತೆ

ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು. ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು.
ಸಂಜೋತಾ ಪುರೋಹಿತ್ ಅನುವಾದಿಸಿದ ಸ್ಕಾಟಿಶ್‌- ಕೆನಡಿಯನ್‌ ಕತೆಗಾರ ರಾಬರ್ಟ್‌ ಬಾರ್ರ್ ಕತೆ “ಒಂದು ಆಲ್ಪೈನ್‌ ವಿಚ್ಛೇದನ” ನಿಮ್ಮ ಓದಿಗೆ

read more
ಮಹಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕಥೆ “ಅಮೀನಾ”

ಮಹಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕಥೆ “ಅಮೀನಾ”

ಮುರುಳಿಯ ಹೆಸರು ಹೇಳುತ್ತಲೇ ಮೆತ್ತಗಾಗಿದ್ದ ಅಮೀನಾ ತನ್ನ ಕತೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಯೋಚಿಸಲಾರಂಭಿಸಿದಳು ‘ನಂಗೆ ನೆನಪಿರುವಂತೆ ನನ್ನ ಅಪ್ಪ ಲಾಡ್‌ ಸಾಬ್‌ ಗುಜುರಿ ಕೆಲಸ ಮಾಡುತ್ತಿದ್ದ, ದುಡಿದದ್ದಕ್ಕಿಂತ ಸೈಕಲ್‌ ತುಳಿದದ್ದೇ ಹೆಚ್ಚು. ಸೈಕಲ್ಲು ಚಲಿಸಿದರೆ ನಮ್ಮ ಬದುಕೂ ಚಲಿಸುತ್ತಿತ್ತು. ಅಮ್ಮಿ ಮನೇಲಿ ಬೀಡಿಯ ಜೊತೆ ನಮ್ಮ ಬದುಕನ್ನೂ ಕಟ್ಟುತ್ತಿದ್ದಳು…”
ಮಹಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕಥೆ

read more
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”

ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕಥೆ “ಜಾದೂ”

‘ಈಗ ನೋಡಿ ಅಸಲೀ ಝಗಡ ಷುರೂ. ಹಾವು ಮುಂಗೂಸ್ ಝಗಡʼ ಅಂದ. ಬುಟ್ಟಿ ಮುಚ್ಚಳ ತೆಗೆದ. ಹಾವು ಹೆಡೆ ಎತ್ತಿತು. ಪುಂಗಿ ಊದುತ್ತಾ ಮುಷ್ಠೀನ ಹಿಡಿದು, ಕಚ್ಚಲಿ ಅನ್ನೋ ಥರ ಆಡಿಸಿದ. ಅದು ಕಚ್ಚೋಕೆ ಬಂದರೆ ಮುಷ್ಠೀನ್ನ ಹಿಂದಕ್ಕೆಳೆದುಕೋತಾ ಇದ್ದ. ಇವನು ಹಾವು ಮುಂಗುಸಿ ಜಗಳ ತೋರಿಸ್ತಾ ಇಲ್ಲವಲ್ಲ. ಜಗಳ ತೋರಿಸ್ರೀ ಅಂತ ಕೇಳ್ಳಾ? ಬೇಡಪ್ಪಾ. ಆಮೇಲೆ ನನಗಿನ್ನೇನಾದರೂ ಮಾಡಿಬಿಟ್ಟರೆ ಕಷ್ಟ. ಅವನ ಸಹವಾಸಾನೇ ಬೇಡ. ಕಾಯ್ತಾ ನಿಂತೆ. ‘ಜೋರ್‌ ಸೇ ತಾಲಿ ಬಜಾವೋʼ ಅಂದ.
ಎಸ್. ರಾಮಮೂರ್ತಿ ಬರೆದ ಈ ಭಾನುವಾರದ ಕತೆ “ಜಾದೂ” ನಿಮ್ಮ ಓದಿಗೆ

read more
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

2042 ಏಪ್ರಿಲ್ ಏಳನೇ ತಾರೀಕು. ಅಮ್ಮನನ್ನು ಕಳಿಸಿ ಒಂದು ವಾರವಾಗಿತ್ತು. ಹಳೆಯ ದೃಶ್ಯದ ಪುನರಾವರ್ತನೆ ಆಯಿತು. ಒಂದು ಬದಲಾವಣೆ ಎಂದರೆ ಅಮ್ಮ ಮನೆಯಲ್ಲಿ ಇರಲಿಲ್ಲ. ಬಂದವರು ಫಾರ್ಮಾಲಿಟಿ ಮುಗಿಸಿ ಚೆಕ್ ಹಾಗೂ ಸೂಟ್ಕೇಸ್‌ನೊಂದಿಗೆ ಅವನಿಯನ್ನು ಕರೆದುಕೊಂಡು ವಾಹನದಲ್ಲಿ ಹೊರಟರು. ಹೊರಡುವ ಮುನ್ನ ಅವನಿ ಕೇಳಿದಳು “ಅಮ್ಮನನ್ನು ಕಳಿಸುವೆ ಎಂದಲ್ಲವೇ ನನ್ನ ಸಹಿ ಪಡೆದದ್ದು… ಈ ಮಸಲತ್ತು ತಿಳಿದಿರಲಿಲ್ಲ, ಅದಕ್ಕೇನಾ ಎರಡು ಪೇಪರ್‌ಗೆ ಸಹಿ ಹಾಕಿಸಿಕೊಂಡದ್ದು… ಸರಿ, ದೇವರು ನಿಮಗೆ ಒಳ್ಳೆಯದು ಮಾಡಲಿ. ಗುಡ್ ಬೈ.” ಎಂದು ಹೊರಟು ಹೋದಳು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ಹಳೆ ಪಾತ್ರೆ… ಹಳೆ ಕಬ್ಬಿಣ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ

ಸರಿತಾ ನವಲಿ ಬರೆದ ಈ ಭಾನುವಾರದ ಕಥೆ

ಸಾಲಿಗೆ ಹೋಗೋ ಮಕ್ಕಳಿಗಂತೂ ಈ ಕೊಲೆ ಸುದ್ದಿ ತಾವು ನೋಡಿದ ಸಿನೆಮಾ ಕಥಿ ಹಂಗ ಕಂಡಿತು. ಕೆಲವೊಬ್ಬರಂತೂ ‘ಪುಟಾಣಿ ಏಜಂಟ್’ ಆಗಿಬಿಟ್ಟರು. ಕೊಲೆಗಾರರನ್ನು ಹಿಡಿಲಿಕ್ಕೆ ಪೊಲೀಸರು ನಾಯಿ ತೊಗೊಂಡು ಬಂದಾರಂತ, ಅವು ಅಪರಾಧಿಗಳ ವಾಸನಿ ಹಿಡಿದು ಹುಡಿಕಿಕೊಂಡು ಊರು ಹೊರಗ ಹರೀತಿದ್ದ ನದಿ ತನಕ ಹೋಗಿ ನಿಂತವು ಅಂತೆಲ್ಲ ಮಾತಾಡಿಕೊಂಡರು. ಅದೇ ಸಾಲಿಯೊಳಗ ಐದನೇತ್ತಿ ಓದ್ತಿದ್ದ ಪುಟ್ಟಿ ಈ ಮಾತುಗಳನ್ನೆಲ್ಲ ಕೇಳಿಸಿಕೊಂಡಾಗ ಆಕಿಗೆ ಹಿಂದಿನ ರಾತ್ರಿ ಸಬ್ ಇನ್ಸಪೆಕ್ಟರ್ ರವಿ ಅವರ ಮನಿಗೆ ಬಂದಿದ್ದು ನೆನಪಾಯಿತು.
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಶಿಕ್ಷೆ” ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ