Advertisement

Category: ಸರಣಿ

ಸುಂದರ ಕಾಡಿನ ರೋಚಕ ಕಥೆಗಳು-೮: ರೂಪಾ ರವೀಂದ್ರ ಜೋಶಿ ಸರಣಿ

ಜೇನು ತುಂಬಿದ ರಟ್ಟಿನ ಜೊತೆಗೆ ಇರುವ ಜೇನು ನೊಣಗಳ ಮೊಟ್ಟೆ ಮರಿ ತುಂಬಿದ್ದ ರಟ್ಟನ್ನು ನಿರ್ದಯವಾಗಿ ಬಿಸಾಡಲಾಗುತ್ತಿತ್ತು. ಈ ಹೊಗೆಯ ತಾಪಕ್ಕೆ ನೂರಾರು ಜೇನು ನೊಣಗಳು ಸಾಯುತ್ತಿದ್ದವು. ಒಂದಿಷ್ಟು ದಿಕ್ಕೆಟ್ಟು ಹಾರಿ ಹೋಗುತ್ತಿದ್ದವು. ಇದನ್ನೆಲ್ಲಾ ಈಗ ನೆನೆದರೆ, ‘ಛೆ… ನಾವು ಮನುಷ್ಯರು ಎಷ್ಟು ಸ್ವಾರ್ಥಿಗಳು. ಪಾಪದ ನೊಣಗಳು ಊರೂರು ಸುತ್ತಿ ಮಕರಂದ ಸಂಗ್ರಹಿಸಿ ತಮಗಾಗಿ ತಯಾರಿಸಿಕೊಂಡಿದ್ದ ಊಟವನ್ನು ಮೋಸದಿಂದ ಅಪಹರಿಸುವುದಲ್ಲದೇ ಅವರ ಪ್ರಾಣಕ್ಕೂ ಹಾನಿಯುಂಟು ಮಾಡುತ್ತೇವಲ್ಲಾ..
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೇಳನೆಯ ಕಂತು

Read More

“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

ಫುಲೆ ಶಾಲೆಯಲ್ಲಿ ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ನಾಲ್ಕನೆಯ ಬರಹ

Read More

“ಭುಜಂಗ”: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಜಾಣ ಹಕ್ಕಿಗಳು ಒಂದು ರೀತಿಯಲ್ಲಿ ಕಾಡಿನ ಕಾವಲುಗಾರರೆಂದೇ ಹೇಳಬಹುದು. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಕೋತ್ವಾಲ್ ಅಂದರೆ ಪೊಲೀಸ್ ಎಂದೇ ಕರೆಯುತ್ತಾರೆ! ಅಂತೆಯೇ ಭುಜಂಗ ಒಂದು ನಿರ್ಭಯ ಹಕ್ಕಿ; ಎಷ್ಟೋ ಸಾರಿ ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ಅಲ್ಲದೆ ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಅಟ್ಟಿಸಿಕೊಂಡು ಹೋಗಿ, ಹೊಡೆದೋಡಿಸುವುದರಲ್ಲಿ ಬಹಳ ನಿಷ್ಣಾತ! ಭುಜಂಗನಲ್ಲಿ ಈ ಎದೆಗಾರಿಕೆ ಮತ್ತು ನಿರ್ಭೀತಿಯ ಗುಣವನ್ನು ಮನಗಂಡಿರುವ, ಎಷ್ಟೋ ಸಣ್ಣಪುಟ್ಟ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಭುಜಂಗ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಸೇಫರ್ ಜೋನ್ ನಿಂದ ಹೊರಬರುವುದನ್ನು ಕಲೀಬೇಕು…: ಬಸವನಗೌಡ ಹೆಬ್ಬಳಗೆರೆ ಸರಣಿ

ಎಷ್ಟೋ ಜನಕ್ಕೆ ತಾವು ಈಗಿರುವ ಕೆಲಸ, ಸ್ಥಿತಿ ಸರಿಯಿಲ್ಲವೆಂದೆನಿಸಿರುತ್ತದೆ. ಯಾರನ್ನೇ ಕೇಳಲಿ ಈ ಕೆಲಸ ಸರಿಯಿಲ್ಲ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದು ದೂಷಣೆ ಮಾಡುತ್ತಿರುತ್ತಾರೆ. ಆದರೆ ತಮಾಷೆ ಅಂದ್ರೆ ಕಡೇವರೆಗೂ ಬೇರೆ ಕೆಲಸಕ್ಕೆ ಪ್ರಯತ್ನಿಸದೇ ಅದೇ ಕೆಲಸದಲ್ಲಿ ಮುಂದುವರೆಯುತ್ತಿರುತ್ತಾರೆ!! ಕೆಲವರಂತೂ ಅದೇ ಕೆಲಸದಲ್ಲಿದ್ದುಕೊಂಡು ಬೇರೆ ಕೆಲಸಕ್ಕೆ ಪ್ರಯತ್ನಿಸಿ ಯಶಸ್ವಿಯೂ ಆಗುತ್ತಾರೆ. ಇಲ್ಲಿ ಹೇಳೋಕೆ ಹೊರಟಿರೋದು ಏನಪ್ಪಾ ಅಂದ್ರೆ ನಾವು ಇದ್ದ ಸ್ಥಿತಿಯಲ್ಲಿ ಖುಷಿಯಾಗಿದ್ದುಕೊಂಡು ಬೇರೆಯದ್ದಕ್ಕೆ ಪ್ರಯತ್ನಿಸುತ್ತಾ ಇರಬೇಕು. ಸಿಕ್ಕರೆ ಒಳ್ಳೆಯದು, ಒಂದೊಮ್ಮೆ ಸಿಗದಿದ್ದರೆ ಈಗಿರುವ ಕೆಲಸವನ್ನು ಪ್ರೀತಿಸಬೇಕು. ಅದನ್ನು ಬಿಟ್ಟು ಬೇರೆಯದ್ದಕ್ಕೂ ಪ್ರಯತ್ನಿಸದೇ ಇರೋ ಕೆಲಸವನ್ನು ಗೊಣಗಿಕೊಂಡು ಮಾಡಿದರೆ ಅದು ನಮ್ಮ ನೆಮ್ಮದಿಗೆ ಲಾಸ್ ಅಷ್ಟೇ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೈದನೆಯ ಕಂತು ನಿಮ್ಮ ಓದಿಗೆ

Read More

ನೀನು ಬೆಳೆದರೆ ನಾನು ಬೆಳೆವೆನು: ಚಿತ್ರಾ ವೆಂಕಟರಾಜು ಸರಣಿ

ಎಷ್ಟು ಸಲ ಪ್ರವೇಶ ಕೊಡಬಾರದ ಸೀನ್‌ಗಳಲ್ಲಿ ತಪ್ಪಿ ಪ್ರವೇಶ ಕೊಟ್ಟಿರುತ್ತೇವೆ, ಆಡಲೇಬೇಕಾದ ಮಾತನ್ನು ಆಡದೇ ಉಳಿದಿದ್ದೇವೆ. ಆಡಬಾರದಿದ್ದ ಸಂಭಾಷಣೆಗಳನ್ನು ಸುಲಭವಾಗಿ ಆಡಿಬಿಟ್ಟಿರುತ್ತೇವೆ. ಏನೇ ಮಾಡಲಿ ಒಮ್ಮೆ ಆ ನಾಟಕ ಮುಗಿದ ಮೇಲೆ ಮುಗಿಯಿತು… ಒಮ್ಮೆ ಪ್ರದರ್ಶನ ಮುಗಿದ ಮೇಲೆ ಮತ್ತೆ ಆ ದೃಶ್ಯದಲ್ಲಿ ನಮ್ಮ ಎಂಟ್ರಿ ಇಲ್ಲ. ಮತ್ತೆ ಬೇರೆಯದೇ ನಾಟಕದಲ್ಲಿ ಬೇರೆಯದೇ ಪಾತ್ರ! ನಾಟಕದ ಮಜಾ ಎಂದರೆ ಬದುಕಿಗಿಲ್ಲದ ಮರು ಪ್ರದರ್ಶನದ ಅವಕಾಶ ನಾಟಕದಲ್ಲಿದೆ. ಎಲ್ಲ ನಟರೂ ಒಪ್ಪಿದರೆ ಮತ್ತೆ ಅದೇ ನಾಟಕವನ್ನು ಆಡಬಹುದು. ಬೇಕಿದ್ದರೆ ಬೇರೆ ರೀತಿಯಲ್ಲಿ. ಆದರೆ, ಪ್ರತಿ ಬಾರಿಯೂ ಹೊಸದಾಗಿ ಅಭಿನಯಿಸಬೇಕು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ