Advertisement

Tag: ಕೆಂಡಸಂಪಿಗೆ

ಬದುಕಿನ ರಾಗದ ಅವರೋಹಣ – ವೃದ್ಧಾಪ್ಯವೆಂಬ ಜೀವನಪದವಿ!: ಡಾ. ಎಲ್.ಜಿ. ಮೀರಾ ಅಂಕಣ

ಸಾಮಾನ್ಯವಾಗಿ, ಬದುಕಿನ ಈ ಹಂತದ ಸಕಾರಾತ್ಮಕ ಚಿತ್ರಣವು ಅದೃಶ್ಯವಾಗಿರುತ್ತೆ ಅಥವಾ ನಕಾರಾತ್ಮಕವಾಗಿರುತ್ತೆ. ಇದರಿಂದಾಗಿ ಈ ಜೀವನದ ಬಗ್ಗೆ ಯೋಜನೆ, ಯೋಚನೆ, ಪೂರ್ವಚಿಂತನೆಗಳು ಸರಿಯಾಗಿ ನಡೆಯುವುದಿಲ್ಲ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆದ ಅದ್ಭುತ ಮುನ್ನಡೆಗಳಿಂದಾಗಿ ಮಾರಾಣಾಂತಿಕ ರೋಗಗಳಿಂದ ಮನುಕುಲವು ಮುಕ್ತಿ ಪಡೆದುಕೊಂಡು, ಮನುಷ್ಯನ ಸರಾಸರಿ ಆಯುಸ್ಸು ಹೆಚ್ಚಿ, ತಮ್ಮ 60ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಮೇಲೂ ಜನರು ಸುಮಾರು 20ರಿಂದ 40 ವರ್ಷಗಳ ತನಕ ಬದುಕುತ್ತಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತನೆಯ ಬರಹ

Read More

ರಂಗ ಕಲಾವಿದೆಯರ ಬದುಕು…: ಚಿತ್ರಾ ವೆಂಕಟರಾಜು ಸರಣಿ

ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ‌, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಘಟನೆಯಿಂದ ನಾನು ಕಲಿತ, ಪರರೂ ಅನುಸರಿಸಬಹುದಾದ ಒಂದು ಪಾಠವನ್ನು ನಾನಿಲ್ಲಿ ಹಂಚಿಕೊಳ್ಳ ಬಯಸುತ್ತೇನೆ. ನಾವು ಯಾವುದೇ ಸಂದರ್ಶನಕ್ಕೂ ಹಾಜರಾಗುವ ಮುನ್ನ ನಾವು ಅವರು ನೀಡಿದ್ದ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕು. ಅಲ್ಲದೇ ಅವರು ಕೋಪ ಬರುವಂತಹ ಯಾವುದೇ ಪ್ರಶ್ನೆಯನ್ನು ಕೇಳಿದ್ರೂ ಅವರು ನಿಮ್ಮ ಮಾತಿನ ಶೈಲಿ ಮತ್ತು ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ತಿಳಿಯಬೇಕು. ಸಾಧ್ಯವಾದಷ್ಟು ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬೇಕು. ಉತ್ತರ ಗೊತ್ತಿಲ್ಲದಿದ್ದಾಗ ಪ್ರಾಮಾಣಿಕವಾಗಿ ಗೊತ್ತಿಲ್ಲವೆಂದು ಹೇಳುವುದರ ಜೊತೆಗೆ ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಬೇಕೇ ಹೊರತು ತಪ್ಪು ಉತ್ತರ ಹೇಳಬಾರದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

Read More

ಜೀವಂತಿಕೆ ಒಸರುವ ಕವಿತೆಗಳು: ಸ್ಮಿತಾ ಅಮೃತರಾಜ್ ಬರಹ

ನಾವು ಬದುಕುವ ರೀತಿ ನೀತಿ‌ ನಮ್ಮ ಪ್ರತಿಷ್ಟೆ ಪರಾಕಾಷ್ಟೆಗಳು ಅದೆಷ್ಟಿದ್ದರೂ ನಾವೆಲ್ಲರೂ ಮನುಷ್ಯರು. ಆಳದಲ್ಲಿ ನಾವೆಲ್ಲರೂ ಅನುಭವಿಸುವ ಭಾವಗಳು ಒಂದೇ. ನಾನಾ ಸ್ತರಗಳಲ್ಲಿ‌ ಪ್ರಕಟಗೊಳ್ಳುವ ನಮ್ಮ ನೋವು ನಲಿವು ಗೆಲುವು ಸೋಲು ಅಪಮಾನ ಎಲ್ಲವೂ ಇಲ್ಲಿ ಕವಿತೆಯಾಗಿ ನಿಸೂರಾಗುತ್ತವೆ. ನಾಗರೇಖಾ ತನ್ನದೇ ರೀತಿಯಲ್ಲಿ ಕವಿತೆ ಕಟ್ಟುವ ಕೌಶಲ್ಯವನ್ನು‌‌ ಸಿದ್ಧಿಸಿಕೊಂಡಿದ್ದಾರೆ. ತಾನು ಬದುಕಿದ, ತಾನು ಕಾಣುವ ಸುತ್ತ ಮುತ್ತಲಿನ ಸಹಜ ಸಂಗತಿಗಳನ್ನು ಕವಿತೆಯ ಮೂಲಕ‌ ತರುತ್ತಾ ಅದನ್ನು ಮತ್ಯಾವುದೋ‌ ಸಂದರ್ಭಕ್ಕೆ, ಸಂಗತಿಗಳಿಗೆ ಕೊಂಡಿ ಕೂಡಿಸುತ್ತಾರೆ. ಒಂದು ವಸ್ತುವನ್ನು ತೆರೆದಿಡುತ್ತಾ ಮತ್ಯಾವುದೋ ಹೊಳಹನ್ನು ಕಾಣಿಸುವುದು ನಾಗರೇಖರ ಕವಿತೆ ವೈಶಿಷ್ಟ್ಯತೆ.
ನಾಗರೇಖಾ ಗಾಂವಕರ ಕವನ ಸಂಕಲನ “ಪಾದಕ್ಕೊಂದು ಕಣ್ಣು” ಕುರಿತು ಸ್ಮಿತಾ ಅಮೃತರಾಜ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ