Advertisement

ಸರಣಿ

ಟೀವಿ’ಯಿದ್ದವರು ‘ಠೀವಿ’ಯಿಂದ ಬೀಗುತ್ತಿದ್ದ ಕಾಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ಟೀವಿ’ಯಿದ್ದವರು ‘ಠೀವಿ’ಯಿಂದ ಬೀಗುತ್ತಿದ್ದ ಕಾಲ!: ಬಸವನಗೌಡ ಹೆಬ್ಬಳಗೆರೆ ಸರಣಿ

ದಿನ ಸಂಜೆ ಒಂದು‌ ಧಾರವಾಹಿ, ಶುಕ್ರವಾರ ‘ಚಿತ್ರಮಂಜರಿ’ ಹೆಸರಿನಲ್ಲಿ‌ ಕನ್ನಡ ಚಲನಚಿತ್ರ ಗೀತೆಗಳು ಬರುತ್ತಿದ್ದವು. ಇವನ್ನ ನೋಡಲು ನಾವು ತುಂಬಾ ಕಾತುರರಾಗಿ ಸಂಜೆ ಏಳು ಗಂಟೆಗೆಲ್ಲಾ ಟಿವಿ ಮುಂದೆ ಹಾಜರಾಗುತ್ತಿದ್ದೆವು. ನಮ್ಮಜ್ಜನ ಮನೆಯಲ್ಲಿ ಟಿವಿ ಇರಲಿಲ್ಲ. ನಾವು ಬೇರೆಯವರ ಮನೆಗೆ ಟಿವಿ‌ ನೋಡಲು ಹೋಗಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಾಲ್ಕನೆಯ ಕಂತು ನಿಮ್ಮ ಓದಿಗೆ

read more
ರಂಜಾನ್ ದರ್ಗಾ ಬರೆಯುವ ʻನೆನಪಾದಾಗಲೆಲ್ಲʼ ಸರಣಿ ಮತ್ತೆ ಆರಂಭ

ರಂಜಾನ್ ದರ್ಗಾ ಬರೆಯುವ ʻನೆನಪಾದಾಗಲೆಲ್ಲʼ ಸರಣಿ ಮತ್ತೆ ಆರಂಭ

ಒಂದು ದಿನ ಮಧ್ಯಾಹ್ನದ ಡ್ಯೂಟಿಗಾಗಿ ಪ್ರಜಾವಾಣಿ ಕಚೇರಿಗೆ ಬರುವಾಗ ಟೈಂ ಆಫೀಸಿನ ಎದುರಿಗೆ ಮುಖ್ಯ ಗೇಟ್ ಮುಂದೆ ಜವಾಹಾರ ಬಾಲಭವನದ ದಿನಗೂಲಿಗಳೆಲ್ಲ ನಿಂತಿದ್ದರು. ಇವರೇಕೆ ಬಂದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ಒಬ್ಬಾತ ಮುಂದೆ ಬಂದು, “ಸರ್ ನಿಮಗೆ ಥ್ಯಾಂಕ್ಸ್ ಹೇಳಲು ಬಂದಿದ್ದೇವೆ. ತಾವು ಬರೆದ ಲೇಖನ ಫಲ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಚಂದ್ರಪ್ರಭಾ ಅರಸು ಅವರು ನಮ್ಮ ಸ್ಥಿತಿಗತಿ ಅರಿತುಕೊಂಡು ನಮ್ಮೆಲ್ಲರ ಸಂಬಳ ಹೆಚ್ಚು ಮಾಡಿದ್ದಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 67ನೇ ಕಂತು ನಿಮ್ಮ ಓದಿಗೆ

read more
ಬೆಂಗಳೂರ “ಶೌಚಾಲಯ”ದ ಇತಿಹಾಸ: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರ “ಶೌಚಾಲಯ”ದ ಇತಿಹಾಸ: ಎಚ್. ಗೋಪಾಲಕೃಷ್ಣ ಸರಣಿ

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಚಿವ ಮಂಡಳಿಯಲ್ಲಿ ಬಸವ ಲಿಂಗಪ್ಪ ಅವರು ನಗರಾಡಳಿತ ಸಚಿವರು. ಅರಸು ಅವರ ಹಾಗೆಯೇ ಇವರದು ಸಹ ಕೆಲವು ಕ್ರಾಂತಿಕಾರಿ ಯೋಜನೆಗಳಿದ್ದವು. ಅವುಗಳಲ್ಲಿ ಒಂದು ಮಲ ಹೊರುವ ಪದ್ಧತಿಯನ್ನು ನಿಲ್ಲಿಸುವುದು. ಇವರ ಆಡಳಿತ ಅವಧಿಯಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

read more
ಗೋಧಿ ತೆನೆ ತೊಟ್ಟಿಲು…: ಚೈತ್ರಾ ಶಿವಯೋಗಿಮಠ ಸರಣಿ

ಗೋಧಿ ತೆನೆ ತೊಟ್ಟಿಲು…: ಚೈತ್ರಾ ಶಿವಯೋಗಿಮಠ ಸರಣಿ

ಪ್ರಕೃತಿ ಜೊತೆಗಿನ ಅವಳ ಪಿಸುಮಾತು ನಮ್ಮನ್ನೆಲ್ಲಾ ಒಂದು ನಳನಳಿಸುವ ಹೂದೋಟದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗಾಗಿ ಬರೆದ ಉಪ್ಪು, ರೊಟ್ಟಿ, ನೀರಿನ ಕವಿತೆಗಳು ಬಾಯಾರಿದವರ ದಾಹವನ್ನು ಹಿಂಗಿಸುವಂಥವು. ಅವಳ ತಾಯಿಗರುಳಿನಿಂದ ಉಣಿಸುವ ನೆಲದ ಸೊಗಡಿನ ಅಮೃತದಂತಹ ಕವಿತೆಗಳು ಮನುಕುಲದ ಎದೆ ತುಂಬಿಸುವಂಥವು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಗೇಬ್ರಿಯಲ್ಲ ಮಿಸ್ತ್ರಾಲ್ ಅವರ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

read more
ಹಾವುಗಳು ಮತ್ತು ಪ್ರ(ಕ್ಷುಬ್ಧ)ಶಾಂತಿ ನಿಲಯ: ಸುಮಾವೀಣಾ ಸರಣಿ

ಹಾವುಗಳು ಮತ್ತು ಪ್ರ(ಕ್ಷುಬ್ಧ)ಶಾಂತಿ ನಿಲಯ: ಸುಮಾವೀಣಾ ಸರಣಿ

ಕಡೆಗೆ ನಿದ್ರೆಮಾಡಲು ಯಾರು ಚಡಪಡಿಸುತ್ತಾರೆ.. ಪ್ರತಿದಿನ ಬೆಡ್ ತೆಗೆಯಲು ಮೊದಲು ಯಾರು ಹೋಗುತ್ತಾರೆ ಇತ್ಯಾದಿ ಪ್ರಶ್ನೆಗಳು ಬರುತ್ತಿದ್ದವು. ಯಾವಾಗಲೂ ನಿದ್ರೆ ಮಾಡಲು ಕಾತರಿಸುವವರನ್ನು ಇನ್ನಷ್ಟು ಸತಾಯಿಸಬೇಕು ಅನ್ನುವುದು ಅವರ ಆಸೆಯಾಗಿತ್ತು. ಅಷ್ಟರಲ್ಲಿ ನಿದ್ರಾದೇವಿ ಎಲ್ಲರ ಮೇಲೆ ಬಂದು ನಿಧಾನವಾಗಿ ಒಂದೊಂದು ಸುತ್ತು ಸೊಂಟ ತಿರುಗಿಸುವ, ಆಕಳಿಸುವ ದೃಶ್ಯಗಳು ಹೆಚ್ಚಾದಾಗ ವಾರ್ಡನ್ ಮತ್ತು ಅಟೆಂಡರ್ ಅದು ಚಿಕ್ಕ ಹಾವು; ಅದರ ಅಮ್ಮ ನಿಮ್ಮ ಬೆಡ್‌ಗಳ ಅಡಿಯಲ್ಲಿ ಇರಬಹುದು ಎಂಬ ಹುಸಿ ಬಾಂಬ್ ಸಿಡಿಸಿದರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

read more
ನೆನಪುಗಳ ಬುತ್ತಿ “ನನ್ನ ಮನೆ”: ಮಾರುತಿ ಗೋಪಿಕುಂಟೆ ಸರಣಿ

ನೆನಪುಗಳ ಬುತ್ತಿ “ನನ್ನ ಮನೆ”: ಮಾರುತಿ ಗೋಪಿಕುಂಟೆ ಸರಣಿ

ಮನೆ ನೆನೆದರೆ ಸಾಕು ಬಾಲ್ಯದ ಸಿಹಿ ಕಹಿ ಘಟನೆಗಳೆಲ್ಲ ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ. ನಮ್ಮದು ಹಳೆಯ ಕಾಲದ ನಮ್ಮ ತಾತ ಕಟ್ಟಿಸಿದ ಜಂತಿಮನೆ ಮೊದಮೊದಲು ಅದು ಸಗಣಿಯಿಂದ ಶೃಂಗಾರವಾಗುತ್ತಿದ್ದದ್ದು ಕ್ರಮೇಣ ಅದಕ್ಕೆ ಗಾರೆ ಹಾಕಲಾಯಿತು. ಮರಳು ಮತ್ತು ಸುಣ್ಣವನ್ನು ಒಟ್ಟಿಗೆ ಅರೆದು ಕಲಸಿ ಅದನ್ನು ಹಾಸುನೆಲಕ್ಕೆ ನುಣುಪಾದ ಕಲ್ಲಿನಿಂದ ಉಜ್ಜಿ ಉಜ್ಜಿ ನೆಲಕ್ಕೆ ಅಂಟುವಂತೆ ಮಾಡುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

read more
ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೆರಡನೆಯ ಕಂತು

read more
ಜೈಲು ಮತ್ತು ಮಳೆ: ಕೆ. ಸತ್ಯನಾರಾಯಣ ಸರಣಿ

ಜೈಲು ಮತ್ತು ಮಳೆ: ಕೆ. ಸತ್ಯನಾರಾಯಣ ಸರಣಿ

ದೂರದೃಷ್ಟಿಯುಳ್ಳ ಆಡಳಿತಗಾರರ ಲೆಕ್ಕಾಚಾರವನ್ನೂ ಮೀರಿ ಅಪರಾಧಿಗಳು, ಪಾಪಿಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಲೇ ಇತ್ತು. ನಗರವು ಬೆಳೆದಂತೆ, ಎಲ್ಲ ವರ್ಗದ ಜನರು, ತಂತ್ರಜ್ಞರು, ಪೋಲೀಸರು ಕೂಡ ಹೆಚ್ಚಾಗುತ್ತಾರೆ ಎಂಬುದು ನಿಜವಾದರೂ, ಅಪರಾಧಿಗಳ ಸಂಖ್ಯೆಯ ಬೆಳವಣಿಗೆಯ ದರ ಎಲ್ಲ ಅನುಪಾತಗಳನ್ನೂ ಮೀರಿತ್ತು. ಪೋಲೀಸರ ದಕ್ಷತೆ, ನಾಗರಿಕರ ಸಮಾಜಪ್ರಜ್ಞೆಯಿಂದಾಗಿ ಎಲ್ಲ ಠಾಣೆಗಳಲ್ಲೂ ಹೆಚ್ಚು ಹೆಚ್ಚು ದೂರುಗಳು ಬರುತ್ತಿದ್ದವು, ದಾಖಲಾಗುತ್ತಿದ್ದವು. ಕಳ್ಳರು, ಕೊಲೆಗಡುಕರು ಕೂಡ ಬೇಗ ಬೇಗ ಸಿಕ್ಕಿಹಾಕಿಕೊಳ್ಳುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಐದನೆಯ ಬರಹ ನಿಮ್ಮ ಓದಿಗೆ

read more
ಅಡಕತ್ತರಿಯಲ್ಲಿ ನಿಂತು…: ಗುರುಪ್ರಸಾದ ಕುರ್ತಕೋಟಿ ಸರಣಿ

ಅಡಕತ್ತರಿಯಲ್ಲಿ ನಿಂತು…: ಗುರುಪ್ರಸಾದ ಕುರ್ತಕೋಟಿ ಸರಣಿ

ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ