ಪತ್ತೇದಾರಿ ಇಲಾಖೆಯೇ ಬೇಡವೆಂದ ಗೃಹಸಚಿವ: ಕೆ. ಸತ್ಯನಾರಾಯಣ ಕಥಾ ಸರಣಿ
ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

