Advertisement

Tag: ಕೆಂಡಸಂಪಿಗೆ

“ಏನು ಚಂದಮಾಮ ಕಥೆ ಹೇಳ್ತಿದೀಯಾ?”: ವಿನಾಯಕ ಅರಳಸುರಳಿ ಅಂಕಣ

ಈ ಅವಾಂತರಗಳೆಲ್ಲಾ ಏನೇ ಆದರೂ ಬರೆಯಬೇಕು ಎಂಬ ಸ್ವಸ್ಥ ಹವ್ಯಾಸವನ್ನು ಮೊಟ್ಟಮೊದಲ ಬಾರಿಗೆ ಅದೆಷ್ಟೋ ಮಕ್ಕಳ ಎದೆಯಲ್ಲಿ ಬಿತ್ತಿದ, ಕೈ ಹಿಡಿದು ಬರೆಸಿದ, ಬರೆದಿದ್ದಕ್ಕೊಂದು ವೇದಿಕೆ ಕಲ್ಪಿಸಿದ ಶ್ರೇಯ ಈ ಎಲ್ಲ ಮಕ್ಕಳ ಪತ್ರಿಕೆಗಳಿಗೇ ಸಲ್ಲಬೇಕು. ಅವರಿಗೆ ಇಷ್ಟವಾದ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮುಖಾಂತರ ವಿನೋದಮಯವಾದ ಕಥೆಗಳನ್ನು ಹೆಣೆದು, ಅದರೊಳಗೇ ಕಾಣದಂತೆ ನೀತಿಗಳನ್ನು ಬೆರೆಸಿ ಉಣಬಡಿಸುತ್ತಿದ್ದ ಈ ಪತ್ರಿಕೆಗಳು ಓದಿದವರ ಮನಸ್ಸಿನಲ್ಲಿ ಇಂದಿಗೂ ಉಳಿದಿವೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ? ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್‌ ಹೆಗಡೆ ಬರೆದ ‘ಪರಿಸರದ ಮಹಾ ದುರಂತಗಳು’ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

Read More

ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು.
ಆಶಾ ರಘು ಬರೆದ “ಕೆಂಪು ದಾಸವಾಳ” ಕಥಾ ಸಂಕಲನದ ಕತೆ “ನೇಪಥ್ಯ” ಈ ಭಾನುವಾರದ ಬಿಡುವಿನ ಓದಿಗೆ

Read More

ಸಾಮರಸ್ಯವೇ ಇಲ್ಲಿ ಸಲ್ಲುವುದು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ಬರಲಿವೆ. ಬಹುಸೂಕ್ಷ್ಮವಾಗಿ ಅವಲೋಕಿಸಿದರೆ ದಾಳಿಗೀಡಾದ ಧರ್ಮದ ಜನಸಮುದಾಯದ ದನಿಗೆ ಈಗಾಗಲೇ ಒಂದು ನಿರ್ದಿಷ್ಟ ಬಲ ಬಂದಿದೆ. ಇದು ಮತ್ತಷ್ಟು ಬೆಳೆಯುವ ಸೂಚನೆಗಳಿವೆ. ದೂರದ ಅಮೆರಿಕೆಯಲ್ಲಿ ಈ ಜನಸಮುದಾಯವು ಎಲ್ಲಾ ಮಟ್ಟಗಳಲ್ಲೂ ಆಳವಾದ ಪ್ರಭಾವ ಮತ್ತು ಹಿಡಿತವನ್ನು ಹೊಂದಿದೆ. ಮತ್ತೊಂದು ವಸಾಹತುಶಾಹಿ ಸಮಾಜವಾದ ಆಸ್ಟ್ರೇಲಿಯಾದಲ್ಲೂ ಹಾಗಾಗಬಹುದೆ? ದಾಳಿ ನಡೆಸಿದ ಅಪ್ಪ-ಮಗ ಜೋಡಿಯಲ್ಲಿ, ಅಪ್ಪನ ಬಳಿ ಇದ್ದದ್ದು ಭಾರತೀಯ ಪಾಸ್ಪೋರ್ಟ್. ಆತ ಭಾರತದ ಹೈದರಾಬಾದ್ ಮೂಲದವರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ