Advertisement

Tag: ಕೆಂಡಸಂಪಿಗೆ

ಸಂತಾಲಿ ಕವಿಯ ಸ್ತ್ರೀ ಸಂವೇದಿ ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ. ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಸುಂದರ ಕಾಡಿನ ರೋಚಕ ಕಥೆಗಳು-೯: ರೂಪಾ ರವೀಂದ್ರ ಜೋಶಿ ಸರಣಿ

ಇನ್ನು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು, ಮರವನ್ನು ಗುಟ್ಟಾಗಿ ಕಡಿದು ಸಾಗಿಸುತ್ತಿದ್ದರು. ಅರಣ್ಯಾಧಿಕಾರಿಗಳ ಕಣ್ಣುತಪ್ಪಿಸಲು, ದಟ್ಟ ಕಾಡಿನ ನಡುವೆ, ರಾತ್ರಿಯ ಬೆಳದಿಂಗಳ ಬೆಳಕಲ್ಲೇ ಸ್ಥಳೀಯರ ಸಹಾಯದಿಂದ ಈ ಕೆಲಸ ಮುಗಿಸಿ, ಗಪ್ ಚಿಪ್ ಆಗಿ ದಿಮ್ಮಿ ಸಾಗಿಸಿ ಬಿಡುವ ನಿಪುಣರಿವರು. ಆಗೆಲ್ಲ ಹಳ್ಳಿಯಲ್ಲಿ ಕಾಲು ದಾರಿಗಳು ಮಾತ್ರ. ವಾಹನ ಸಂಚಾರಕ್ಕೆ ಅಲ್ಲೊಂದು ಇಲ್ಲೊಂದು ಮಣ್ಣು ರಸ್ತೆ. ಅದು ಬೇಸಿಗೆಗಷ್ಟೇ. ಮಳೆಗಾಲದಲ್ಲಿ ಆ ರಸ್ತೆಯಲ್ಲಿ ನಡೆದರೆ, ಮೊಣಕಾಲು ತನಕ ಹೂತು ಹೋಗುತ್ತಿತ್ತು. ಇನ್ನು ವಾಹನ ಸಂಚಾರ ನೆನೆಸುವುದೂ ಕಷ್ಟ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ..: ವಿನಾಯಕ ಅರಳಸುರಳಿ ಅಂಕಣ

ಕೆಲವೊಮ್ಮೆ ಅಚಾನಕ್ಕಾಗಿ ಬೆಂಗಳೂರಿನ ಮೇಲೆ ಪ್ರೀತಿಯುಕ್ಕುತ್ತದೆ. ಈ ಶಹರ ನಮಗೆ ಬದಕು ಕೊಟ್ಟಿದೆ, ಇದಿನ್ನು ನಮ್ಮ ಊರು, ನಾನಿನ್ನು ಇಲ್ಲಿಯವನು ಎಂದು ನಂಬಲು ಪ್ರಯತ್ನಿಸುತ್ತೇವೆ.‌ ಆಗಲೇ ನಾವು ಪ್ರತಿದಿನ ವ್ಯವಹರಿಸುವ ಅಂಗಡಿಯವನು ಇದ್ದಕ್ಕಿದ್ದಂತೆ ಹತ್ತು ರೂಪಾಯಿಗಾಗಿ ಬಿರುಮಾತಾಡುತ್ತಾನೆ. ವರ್ಷದಿಂದ ಪಕ್ಕದ ಮನೆಯಲ್ಲೇ ವಾಸವಿರುವ ಹೆಂಗಸು ಯಕಶ್ಚಿತ್ ನ್ಯಾಲೆಯ ಮೇಲಿನ ಬಟ್ಟೆ ತೆಗೆದಿಲ್ಲವೆಂಬ ಕಾರಣಕ್ಕೆ ಜಗಳಕ್ಕೆ ನಿಲ್ಲುತ್ತಾಳೆ. ಹೆಗಲ ಮೇಲೆ ಕೈ ಹಾಕಿಕೊಂಡು ಜೊತೆಗೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಮಿತ್ರ ಆಫೀಸು ಬದಲಿಸಿದ ಮರುಕ್ಷಣ ಕರೆ ಸ್ವೀಕರಿಸದೇ, ಮೆಸೇಜೂ ಮಾಡದೇ ಮಾಯವಾಗಿಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಬೇಟೆಗಾರ ಕೀಟವೇ ಬೇಟೆಯಾದಾಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಈ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕೇಳುತ್ತಾ, ವಿಭಾಗೆ ಬಸ್ ಹೊರಟದ್ದೇ ತಿಳಿದಿರಲಿಲ್ಲ. ಅಕ್ಕ ನೀರು ಕುಡಿಯೋಕೆ ಅಂತ ಮಾತು ನಿಲ್ಲಿಸಿದಾಗ, ಕಿಟಕಿಯಾಚೆ ನೋಡಿ, “ಓಹ್! ಆಗ್ಲೆ ಇಷ್ಟು ಮುಂದೆ ಬಂದುಬಿಟ್ವಾ? ಸರಿ, ನೀನು ಮುಂದುವರೆಸು ಕಾವ್ಯಕ್ಕಾ” ಎಂದಳು. “ಹೂಂ, ನಿಮ್ ಭಾವ ಮಾತ್ರ ಅಲ್ಲ, ನಾನೂ ನೋಡಿದೀನಿ ಈ ‘ಕೀಟಗಳನ್ನ ತಿನ್ನೋ ಗಿಡಗಳನ್ನ’ ಗೊತ್ತಾ?” ಎಂದಳು ಕಾವ್ಯಾ ಕೀಟಲೆ ಮಾಡುತ್ತಾ. ಆಗ ವಿಭಾ ನಗುತ್ತಾ, “ಅಯ್ಯೋ! ನೀನೂ ಅಂದ್ರೇನು ಸುಮ್ನೇನಾ ಅಕ್ಕಾ? ನೀನೇನು ನೋಡಿದ್ದು? ಎಲ್ಲಿ ನೋಡ್ದೆ? ಹೇಳ್ಬೇಕು ತಾನೆ ಮತ್ತೆ” ಎಂದು ಅಕ್ಕನಿಗೆ ಪೂಸಿ ಹೊಡೆದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ನಾಲ್ಕನೆಯ ಕತೆ

Read More

ಕನ್ನಡ ಅಧ್ಯಾಪಕರ ದಾರಿದೀಪಗಳು-`ಅನಾಜಿ` ಒಂದು ಸ್ಮರಣೆ: ಎಲ್.ಜಿ.ಮೀರಾ ಅಂಕಣ

ಅನಾಜಿಯವರು “ಅಲ್ಲಮ್ಮ, ಆಧುನಿಕ ಕನ್ನಡ ಕಥನ ಸಾಹಿತ್ಯ ಅಂದ್ರೆ ನವೋದಯದಿಂದ ಈ ಕಾಲದವರೆಗೆ ಸುದೀರ್ಘವಾಗಿದೆ. ನೀವು ಇಷ್ಟು ದೊಡ್ಡ ವ್ಯಾಪ್ತಿ ಇಟ್ಕೊಂಡ್ರೆ ಎಲ್ಲಿಂದ ಎಲ್ಲೀವರೆಗೆ ಅಂತ ಮಾಡ್ತೀರಿ!? ಆಧುನಿಕ ಕನ್ನಡ ಸಾಹಿತ್ಯದ ಪ್ರತಿ ಘಟ್ಟದಿಂದಲೂ ಕೆಲವು ಪ್ರಾತಿನಿಧಿಕ ಲೇಖಕ-ಲೇಖಕಿಯರನ್ನ ಇಟ್ಕೊಂಡ್ರೆ ಮಾತ್ರ ನೋಡಿ ನೀವು ಈ ಅಧ್ಯಯನಕ್ಕೆ ಸ್ವಲ್ಪಾನಾದ್ರೂ ನ್ಯಾಯ ಒದಗಿಸಕ್ಕೆ ಆಗೋದು” ಅಂದರು. ನನಗೆ `ಅರೆ, ಹೌದಲ್ಲ’ ಅನ್ನಿಸಿತು. ಮುಂದೆ ನಾನು ನನ್ನ ಮಾರ್ಗದರ್ಶಕರ ಹತ್ತಿರ ಈ ಬಗ್ಗೆ ಹೇಳಿದಾಗ ಅವರಿಗೂ ಈ ಮಾತು ಒಪ್ಪಿಗೆಯಾಗಿ, ನಂತರ ಹೀಗೆಯೇ ಘಟ್ಟಗಳ ಅನುಸಾರವಾಗಿ, ಪ್ರಾತಿನಿಧಿಕ ಆಧುನಿಕ ಕನ್ನಡ ಲೇಖಕ ಲೇಖಕಿಯರನ್ನು ಇಟ್ಟುಕೊಂಡು ನಾನು ಪಿ.ಎಚ್.ಡಿ. ಅಧ್ಯಯನವನ್ನು ಮುಂದುವರಿಸಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆಂಟನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ