ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”
ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು. ನಾನು ಆಮೇಲೆ ಸಿಗುವೆ” ಎಂದು ಹೊರಗೆ ಧಾವಿಸಿದ. ಗಂಡ ಹೆಂಡತಿಗೆ ಸ್ವಲ್ಪ ಗಾಭರಿ ಆಯಿತು.
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸ್ಲಾ..ಟ್!” ನಿಮ್ಮ ಈ ಭಾನುವಾರದ ಓದಿಗೆ


