ಮಾರ್ಚ್ ೧೨, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಎಲ್ಲ ಬಗೆಯ ಮನುಷ್ಯ ಚಟುವಟಿಕೆಗಳು ಇದ್ದಕ್ಕಿದ್ದಂತೆ ನಿಂತುಹೋದಂತೆ ಕಾಣುವ ಈ ಊರಿನಲ್ಲಿ ಎಲ್ಲವನ್ನೂ ನೋಡಿ ತಿಳಿದು ಅರಿತು ಬರೆಯುವ  ಸಮಾಧಾನವೇನೂ ಸದ್ಯಕ್ಕೆ ಇಲ್ಲ. ತಸ್ಲಿಮಾ ನಸ್ರೀನ್ ಬರೆದ ಲೇಖನವೊಂದು ಕಾರಣವಾಗಿ ಶಿವಮೊಗ್ಗ ನಗರ ಕಳೆದ ಕೆಲವು ದಿನಗಳಿಂದ ನಿಂತುಹೋಗಿದೆ. ಯಾವಾಗಲೂ ಜನಜಂಗುಳಿ, ಗಲಾಟೆ ಗೌಜಿನಿಂದ ತುಂಬಿರುತ್ತಿದ್ದ ಬೀದಿಗಳು ಎಂದಿನ ಜನಜೀವನದ ರೀತಿಯನ್ನು ಮರೆತ ಹಾಗೆ ನಿಶ್ಶಬ್ದವಾಗಿವೆ. ಧೂಳು ಬಿಸಿಲು ತುಂಬಿದ ಈ ನಗರದಲ್ಲಿ ಇದ್ದಕ್ಕಿದ್ದ ಹಾಗೆ ಮಲೆನಾಡಿನ ಕಾಡುಗಳ ದಟ್ಟಮೌನ ಮರುಕಳಿಸಿದ್ದು ನಮ್ಮ ಕಾಲದ ಪುಣ್ಯವೇ ಇರಬೇಕು. ಎಂದಿನಂತೆ ಆ ಸೋಮವಾರದ ಹಗಲು ಕೆಡವುತ್ತಿರುವ ಕಟ್ಟಡಗಳಲ್ಲಿ, ಕಟ್ಟುತ್ತಿರುವ ಸೇತುವೆ-ರಸ್ತೆಗಳಲ್ಲಿ, ಅಗೆಯುತ್ತಿರುವ ಚರಂಡಿಗಳಲ್ಲಿ, ಅದಕ್ಕಾಗಿ ಉರುಳುತ್ತಿರುವ ಮರಗಳಲ್ಲಿ, ಬರಲಿರುವ ಕೈಗಾರಿಕೆ ವಿಮಾನನಿಲ್ದಾಣದ ಕನಸಿನ ಧೂಳಿನಲ್ಲಿ ಮುಳುಗೇಳುತ್ತಿತ್ತು. ಇದಕ್ಕೆಲ್ಲ  ಕೈಗೂಡಿಸುವ ರೀತಿಯಲ್ಲಿ ಪೊಲೀಸರ ಗುಂಡಿಗೆ ಸಿಕ್ಕಿ ಇಬ್ಬರು ಮನುಷ್ಯರು ನೆಲಕ್ಕೆ  ಒರಗಿದ್ದು, ಹಲವಾರು ಅಂಗಡಿಗಳು ಕಾರು ಬೈಕುಗಳು ಬೂದಿಯಾದದ್ದು ನಮ್ಮ ಪುಣ್ಯದ ಮುಂದುವರಿಕೆಯೇ ಇರಬೇಕು.

ಮುಕ್ಕಾಲು ವಾಸಿ ಅಕ್ಷರ ಬರದವರೇ ಇರುವ ನಮ್ಮ ದೇಶದಲ್ಲಿ ಒಂದು ಲೇಖನದ ಕಾರಣದಿಂದ ತಮ್ಮ ಜೀವಮಾನದ ಶ್ರಮ ಹಾಕಿ ಕಟ್ಟಿಕೊಂಡಿದ್ದ ಮನೆ, ಆಸ್ತಿ, ಅಂಗಡಿ, ವಾಹನ ಎಲ್ಲವನ್ನೂ ಕಳೆದುಕೊಂಡು ಜನ ಬೀದಿಗೆ ಬಂದಿದ್ದರೆ, ಅಕ್ಷರ ಬಲ್ಲ ಮಂದಿ ಇದೆಲ್ಲವನ್ನು ಬರೆದ ಲೇಖಕಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಲ್ಲಾದರು...

 ಮಹಿಳಾ ಮೀಸಲಾತಿ ಕೆಲವು ಸರಳ ಸಂಗತಿಗಳು

ಕಳೆದ 14 ವರ್ಷಗಳಿಂದ ರಾಜಕೀಯ ಪಕ್ಷಗಳು ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ಇದಕ್ಕೆ ಅಗತ್ಯವಾದ ಮಸೂದೆಯು ಸಿದ್ಧವಾಗಿದ್ದರೂ ಅದನ್ನು ಲೋಕಸಭೆಯ ಮುಂದಿಟ್ಟು ಅನುಮೋದನೆ ಪಡೆಯುವುದು ಅವುಗಳಿಗೆ ಸಾಧ್ಯವಾಗಿಲ್ಲ. ಈ ಮಸೂದೆಯ ಅನುಮೋದನೆಗೆ ಬಹುಪಾಲು ರಾಜಕೀಯ ಪಕ್ಷಗಳು ಸಿದ್ದವಿದ್ದರೂ ಮಸೂದೆಯನ್ನು ಲೋಕಸಭೆಯ ಮುಂದಿಡುವುದು ಸಾಧ್ಯವಾಗಿಲ್ಲವೆಂದರೆ ಏನನ್ನಬೇಕು? ಹಿಂದುಳಿದ ವರ್ಗಗಳಿಗೆ, ಅಲ್ಪಸಂಖ್ಯಾತ ವರ್ಗಕ್ಕೆ ಮತ್ತು ಪ.ಜಾ ಹಾಗೂ ಪ.ಪಂಗಳಿಗೆ ಸೇರಿದ ಮಹಿಳೆಯರಿಗೂ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡಬೇಕೆಂಬ ಒತ್ತಾಯದಿಂದಾಗಿ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆಯುತ್ತಿಲ್ಲ. ಈ ಬಗೆಯ ಒತ್ತಾಯವನ್ನು ನಾವು ಸುಲಭವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಈ ಒತ್ತಾಯವನ್ನು ಮಸೂದೆಯೊಳಗೆ ಸೇರಿಸುವ ಪ್ರಯತ್ನವನ್ನು ರಾಜಕೀಯ ಪಕ್ಷಗಳು ಮಾಡುತ್ತಿಲ್ಲ. ಈ ಮಸೂದೆಯನ್ನು ವಿರೋಧಿಸುತ್ತಿರುವ ಗುಂಪುಗಳಲ್ಲಿ ಒಂದರದು ವ್ಯಕ್ತ ವಿರೋಧವಾಗಿದ್ದರೆ ಮತ್ತೊಂದರದು ಅವ್ಯಕ್ತ ವಿರೋಧವಾಗಿದೆ. ಈ ಮಸೂದೆೆಗೆ ಯಾವ ಮೂಲೆಗಳಿಂದ ಮತ್ತು ಯಾವ ಕಾರಣಕ್ಕೆ ವಿರೋಧ ಬರುತ್ತ್ತಿದೆ ಎಂಬುದು ತಿಳಿದಿದ್ದರೂ ಅದನ್ನು ಸರಿಪಡಿಸುವ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ವಿಚಾರಣೆಯ ಕಟಕಟೆಯಲ್ಲಿ ಲೇಬರ್ ಸರಕಾರ

ಪ್ರತಿ ರಾತ್ರಿಯನ್ನು ಭಯದ ಅಟ್ಟಹಾಸದಲ್ಲಿ ಬೆಳಗಿಸುವ,ಹಗಲನ್ನು ಕಾಳ ಕತ್ತಲು ಮಾಡುವ ಎದೆ ಬಿರಿಯುವ ವಿಸ್ಫೋಟಗಳಿಂದ ಛಿದ್ರಗೊಳ್ಳುವ ದೇಹಗಳು, ನೆಲಸಮ ಆಗುವ ಕಟ್ಟಡಗಳು ಮತ್ತು ಬದುಕುಗಳಿಂದ... ದೂರ ತಣ್ಣಗಿನ ಹವೆಯಲ್ಲಿ ಇರುವ ದೇಶ ಬ್ರಿಟನ್. ಇಲ್ಲಿ ಇರಾಕಿನ ಕರಾಳ ಸುದ್ದಿಗಳು ಎದೆ ಬಿರಿಯುವ ಸದ್ದುಗಳು ಬಿಬಿಸಿಯಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ...

ಭಾಗವತ ಕಥಾ ೩: ದೇವರೆಂಬವನು ಬಲು ದೊಡ್ಡ ಕೇಳುಗ

ದೊಡ್ಡದೊಂದು ಕಾಡು.  ಅದನ್ನು ಬರಿಯ ಕಾಡೆಂದರೆ ಸಾಲದು.  ಅದರ ಹೆಸರು "ನೈಮಿಷ". "ನೈಮಿಷಾರಣ್ಯ". ಸ್ಥಳಕ್ಕೆ ತನ್ನದೇ ಹೆಸರೊಂದು ಬೀಳದೆ "ಸ್ಥಳ-ಪುರಾಣ" ಬೆಳೆಯುವುದಿಲ್ಲ.  ಸ್ಥಳ-ನಾಮದಿಂದ ಸ್ಥಳ-ಪುರಾಣ. ನಾಮದ ಹಿಂದೆಯೇ ಒಂದು ಪುರಾಣ ಇರುತ್ತದೆ.  ಪುರಾಣ ಎಂದರೇಯೇ ಹಿಂದೆ ಇರೋದು - ಹಿನ್ನೆಲೆ ಎಂದು ಅರ್ಥ. "ನೈಮಿ-ಷ" ಎಂದರೆ ಚಕ್ರದ "ನೇಮಿ" ಮುರಿದು...

ಪ್ರೇಮಶೇಖರ ಕಾಲಂ:ಕಾಶ್ಮೀರ ನರಕವಾದ ಪರಿ

1950 ಮತ್ತು 1990ರ ನಡುವಿನ ನಲವತ್ತು ವರ್ಷಗಳಲ್ಲಿ ಝೀಲಂನಲ್ಲಿ ಅದೆಷ್ಟು ನೀರು ಹರಿದುಹೋಯಿತು!  ಕಾಶ್ಮೀರದಲ್ಲಿ ಅದೆಷ್ಟು ಬದಲಾವಣೆಗಳು ಆಗಿಹೋದವು! ಇಂದು ಪ್ರತ್ಯೇಕತಾವಾದಿಗಳ ಆಡಂಬೋಲವಾಗಿರುವ ಕಾಶ್ಮೀರಿ ಕಣಿವೆ, ಮುಖ್ಯವಾಗಿ ಬಾರಾಮುಲ್ಲಾ ಪಟ್ಟಣ ಅಂದು ಸಂಪೂರ್ಣ ಭಾರತೀಯವಾಗಿತ್ತು. ಪಾಕಿಸ್ತಾನೀ ಆಕ್ರಮಣಕಾರರ ಪಾಶವೀಕೃತ್ಯಗಳಿಂದ ನೊಂದಿದ್ದ ಅಲ್ಲಿನ ಜನರನ್ನು...

 
 ಸುಷ್ಮಾ ಕಾಣುವ 'ಕನಸು'ಗಳ ಕತೆ

ಆ ಕನಸು ಹೀಗೆ ಸಾಗಿತು...

ಟೆರೇಸಿನ ಅಂಚಿನಲ್ಲಿ ನಿಂತು ಮುಸ್ಸಂಜೆಯ ಹೊಂಬಣ್ಣದ ಬೆಳಕಲ್ಲಿ ಉಲ್ಲಸಿತಗೊಳ್ಳುತ್ತಿದ್ದೆ. ಎದುರಿಗೆ ಸುಂದರವಾಗಿ ಹರಡಿಕೊಂಡಿದ್ದ ಮೋಡಗಳು ಬೆನ್ನ ಹಿಂದೆಲ್ಲೋ ಅಡಗಿ ಕುಳಿತು ಹಾಗೇ ಮರೆಯಲ್ಲೇ ಹೊರಟುಬಿಡಲು ಏರ್ಪಾಡು ಮಾಡಿಕೊಳ್ಳುತ್ತಿದ್ದ ನೇಸರನೊಡನೆ ಆಟವಾಡುತ್ತಿದ್ದಂತೆ ತೋರುತ್ತಿದ್ದವು. ನಾನು ಕಳೆದ ದಿನಗಳ ನೆನಪುಗಳ ಆಶ್ರಯ ಪಡೆಯದೇ, ಮುಂಬರುವ ಕ್ಷಣಗಳ ನಿರೀಕ್ಷೆಯ ಕನಸುಗಳಲ್ಲಿ ಕಳೆದು ಹೋಗದೇ, ಬರಿಯ ನಾನೇ ಆಗಿ ಉಳಿದು  'ವಾಸ್ತವ'ದೊಂದಿಗೆ ಮಿಳಿತವಾದ ಆನಂದವನ್ನು ಮನದಲ್ಲಿ ಸೆರೆ ಹಿಡಿಯುತ್ತಿದ್ದೆ.

ಹೀಗೇ ಮುಗಿಲಿನಲ್ಲಿ ಚೆಲ್ಲಿದ್ದ ಬಣ್ಣಗಳು ತಮ್ಮ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತಾ, ಮಾಸಲಾದಂತೆ ಮತ್ತೊಮ್ಮೆ ಆ ಮಾಸಲು ಬಣ್ಣವೆ ಒಂದು ನವಿರಾದ ಭಾವವಾಗಿ ಹೊಸತನವನ್ನು ತೋರಿ ಆತ್ಮೀಯವಾಗುತ್ತಾ ಬದಲಾಗುತ್ತಿತ್ತು. ಹೀಗೇ ಕಾಣದ ಅನಂತತೆಯೆಡೆಗೆ ನನ್ನ ಮನ ಹೊರಳುತ್ತಿರಲು,  ಬಾನಿನ ರಂಗೆಲ್ಲಾ ಒಮ್ಮೆಲೇ ಕಸಿವಿಸಿಯಾದಂತೆ, ಯಾರಿಗೋ ಶರಣಾದಂತೆ ಕಂಡವು. ಕೆಲವೇ ನಿಮಿಷಗಳಲ್ಲಿ ಬಣ್ಣ, ಭಾವಗಳೆಲ್ಲಾ ತೂರಿಹೋಗಿ ನೆರಳೊಂದು ಆಗಸವನ್ನು ಕವಿಯಲಾರಂಭಿಸಿದಾಗ, ತನ್ನ ಕರ್ತವ್ಯಕ್ಕೆ ಹಾಜರಾಗಲು 'ಇರುಳು' ಸ್ವಲ್ಪ ಆತುರಾತುರವಾಗೇ ಇತ್ತ ಬರುತ್ತಿದ್ದುದು ಅರಿವಾಯಿತು.

ಕಣ್ಣುಗಳು ಕೊಂಚ ಸಮಯ ಪರದಾಡಿದವು. ಎಲ್ಲಿಯ ಮುಗಿಲಿನ ಆ ಹೊಳಪು? ಎಲ್ಲಿಯ ಕಪ್ಪು ಕತ್ತಲೆ? ಹೀಗೇ 'ಬದಲಾವಣೆ'ಯ ಪಜೀತಿಯಿಂದ ಕಷ್ಟಪಟ್ಟು ಹೊರಬಂದ ನಯನಗಳು ಮತ್ತೆ ತಮ್ಮ ಎಂದಿನ ಲಹರಿಗೆ ವಾಪಸ್ಸಾಗಲಾರಂಭಿಸಿದವು. 'ಅನಂತತೆ'ಯೆಡೆಗೆ ವಾಲುತ್ತಿದ್ದ ಮನದ ಹಾದಿಯನ್ನು ನಾನು ಈಗ 'ಶಾಶ್ವತತೆ'ಯೆಂದು ಹೆಸರಿಸಿ ಅದರೆಡೆಗೆ ಕರೆದೊಯ್ಯಲಾರಂಭಿಸಿದೆ. ಅಂತಹ ಅಮೋಘವಾದ ದೃಶ್ಯವನ್ನು ತನ್ನೊಳಗೆ ಸೇರಿಸಿಕೊಂಡು, ಈಗ ತನ್ನದೇ ಛಾಪು ಮೂಡಿಸಿ ಅನನ್ಯವಾಗಿ ನಿಂತ ಇರುಳು ನನಗೆ ಇಷ್ಟವಾಗತೊಡಗಿತು. ನಾನು ಇರುಳನ್ನು ಪ್ರೀತಿಸಲಾರಂಭಿಸಿದೆ. ಹೊರಗಿನ...

Font Help
Site Web
ಜನಮತ
‘ಅನಿವಾಸಿ’ ಕನ್ನಡ ಬರಹಗಾರರು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige