ಫೆಬ್ರವರಿ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ನಾನು ಶಾಕ್ತಪಂಥದ ಅಧ್ಯಯನಕ್ಕಾಗಿ ಅಸ್ಸಾಮಿಗೆ ಹೋಗಬೇಕಾಗಿ ಬಂದಿತು. ದಾರಿಯಲ್ಲಿ ಸಿಗುವ ಬಂಗಾಳವನ್ನು ನೋಡಲು ಯತ್ನಿಸಿದೆ. ಹಾಗೆ ತಿರುಗುವಾಗ ಬಂಗಾಳದಲ್ಲಿ ನನಗೆ ಎದ್ದುಕಂಡಿದ್ದು ಅಲ್ಲಿನ ಕೊಳಗಳು. ಅವು ಸಹಸ್ರಾರು ಸಂಖ್ಯೆಯಲ್ಲಿವೆ. ಪುಟ್ಟಕೆರೆಗಳಂತಿರುವ ಇವನ್ನು ಬಂಗಾಳಿಯಲ್ಲಿ `ಪುಖೂರ್' ಎನ್ನುತ್ತಾರೆ. ಬಂಗಾಳವನ್ನು ಹೂಗ್ಲಿಯ ನಾಡು, ಕಾಳಿಯ ನಾಡು, ಕಮ್ಯುನಿಸ್ಟರ ನಾಡು ಎಂದೆಲ್ಲ ಅಂದುಕೊಂಡು ಹೋಗಿದ್ದ ನನಗೆ, ಈ ಕಿರುಗೆರೆಗಳ ಸಂಖ್ಯೆ ನೋಡಿದ ಬಳಿಕ ಇದನ್ನು `ಪುಖೂರ್ ಗಳ ನಾಡು' ಎಂದು ಕರೆಯಬೇಕೆನಿಸಿತು.

ಕೇರಳದಲ್ಲಿರುವಂತೆ, ಐದು ಹತ್ತು ಮನೆಗಳ ನಡುವೆ ಕಡ್ಡಾಯವಾಗಿ ಇಲ್ಲಿ ಒಂದು ಸಾರ್ವಜನಿಕ ಕೊಳವಿದೆ. ಕೆಲವೆಡೆ ಮನೆಗೊಂದು ಕೊಳ. ಇವು ನಮ್ಮ ಕೆರೆಗಳಷ್ಟು ದೊಡ್ಡವಲ್ಲ. ಹೊಂಡಗಳಷ್ಟು ಚಿಕ್ಕವೂ ಅಲ್ಲ. ಬಂಗಾಳದಲ್ಲಿ ಉಳ್ಳವರ ಸಿರಿವಂತಿಕೆಯನ್ನು ಅವರಿಗಿರುವ ಕೊಳಗಳ ಆಧಾರದಲ್ಲಿ ಅಳೆಯುವ ಪದ್ಧತಿಯೂ ಇದೆಯಂತೆ- ತಿಪಟೂರು ಸೀಮೆಯಲ್ಲಿ ಒಬ್ಬ ವ್ಯಕ್ತಿಯ ಸ್ಥಿತಿವಂತಿಕೆಯನ್ನು ಅವನಿಗಿರುವ ತೆಂಗಿನಮರಗಳ ಸಂಖ್ಯೆಯಿಂದ ಅಳೆಯುವಂತೆ. 

ಬಂಗಾಳದಲ್ಲಿ ಒಂದಾಳುದ್ದ ನೆಲಅಗೆದರೆ ಒರತೆ ಉಕ್ಕುವಂತೆ ಅಂತರ್ಜಲ ಮೇಲುಮೇಲೇ ಇದ್ದಂತಿದೆ. ಇದು ಹೂಗ್ಲಿ ನದಿಯು ನೆಲದ ನರನಾಳಗಳಿಗೆ ಇಳಿಸಿದ ನೀರಿರಬಹುದು ಅಥವಾ ಸಮುದ್ರಮಟ್ಟದಲ್ಲಿರುವ ಪ್ರದೇಶಗಳಲ್ಲಿ ಹೀಗೆ ನೀರು ಸಮೃದ್ಧವಾಗಿ ಸಿಗುತ್ತಿರಬಹುದು. ಮಳೆನೀರು ಇಂಗದೆ ನೆಲದ ಮೇಲೆ ಇಲ್ಲಿ ಬಹುಕಾಲ ಇರುತ್ತದೆಯೆಂದು ಕಾಣುತ್ತದೆ. ಕರ್ನಾಟಕದ ಕರಾವಳಿಯಲ್ಲೂ ಈ ಲಕ್ಷಣವಿದೆ ತಾನೇ?...

 ಇಂಟರ್ ಸಿಟಿ ಟ್ರೈನಿನಲ್ಲೊಬ್ಬ ಕನ್ನಡ ಪುಸ್ತಕೋದ್ಯಮಿ

ಚಾಯ್, ಚಾಯ್, ಟಿ... ಟಿ..., ಮಸಾಲೆ ವಡೆ, ಮಸಾಲೆ...ಅಂತ ಟ್ರೈನ್ ಬಂಡಿಯ ಸ್ಟೈಲ್ ನಲ್ಲಿ ಕೂಗ್ತಾ ಇದ್ರು. ಆ ಕೂಗು ಒಂದೊಂದು ಸಾರಿ ನಿದ್ದೆ ಬರೆಸುತ್ತಿತ್ತು. ಅಂಥ ಕೂಗು ನೀವು ರೈಲಿನಲ್ಲಿಯೇ ಕೇಳಬೇಕು. ಮತ್ತೆಲ್ಲೂ ಅಲ್ಲ. ಟ್ರೈನಿ ಪಯಣವೇ ಒಂದು ದಿನ್ಯ ಅನುಭೂತಿ. ನಾನು ಎಂದಿಗೂ ಟ್ರೈನಿನ ಕುತೂಹಲಿ. ಅಲ್ಲಿ ನಡೆಯುವ ಪ್ರತಿಯೊಂದು ಘಟನೆಯು ನನಗಿಷ್ಟ. ಒಂದು ಭೋಗಿಯ ಪ್ರಯಾಣಿಕರು ಐದು ನಿಮಿಷದಲ್ಲಿ ಒಂದೇ ಕುಟುಂಬದವರೇನೋ ಅನ್ನುವಷ್ಟರ ಮಟ್ಟಿಗೆ ಒಂದಾಗಿಬಿಟ್ಟಿರುತ್ತಾರೆ.

ಟ್ರೈನಿನಲ್ಲಿ ಮಾರಲು ಬರುವ ವ್ಯಕ್ತಿಗಳು ತಿನ್ನಲು ವಿವಿಧ ಬಗೆಯ ತಿಂಡಿ ತಿನಿಸುಗಳು, ಆ ಸ್ಥಳದ ವಿಶೇಷ ತಿನಿಸು, ಹಣ್ಣು-ಹಂಪಲುಗಳನ್ನು ಮಾರುತ್ತಾರೆ. ವಿಷಯ ಅದಲ್ಲ ಇಲ್ಲಿ. ನನಗೆ ತಿಳಿದಂತೆ ಟ್ರೈನಿನಲ್ಲಿ ಅತಿ ಹೆಚ್ಚು ತಿನಿಸುಗಳಿಗೋ, ಇಲ್ಲವೆ ಭಿಕ್ಷಾಟನೆ ಹೆಚ್ಚಿರುತ್ತದೆ. ಒಮ್ಮೊಮ್ಮೆ ಅತಿ ಎನ್ನುವಷ್ಟು. ಆದರೆ ನಾನು ಚಿಕ್ಕಮಗಳೂರು ಪಕ್ಕದ ಕಡೂರಿನಿಂದ ಹರಿಹರಕ್ಕೆ ಇಂಟರ್ ಸಿಟಿ ಟ್ರೈನಿನಲ್ಲಿ ಪ್ರಯಾಣಿಸುವಾಗ ಕಂಡದ್ದು ಸ್ವಲ್ವ ಅಚ್ಚರಿ ತಂದಿತು.

ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ದಿನಪತ್ರಿಕೆಗಳನ್ನು ಹಿಡಿದು ಪೇಪರ್... ಪೇಪರ್ ಅಂತ ಕೂಗಿ ಮಾರುವವರಿದ್ದಾರೆ. ಆದರೆ ತನ್ನ ಎರಡೂ ಕೈಗಳಲ್ಲಿ ಎದೆತುಂಬಿಕೊಳ್ಳುವಷ್ಟು ಪುಸ್ತಕಗಳನ್ನು...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ಅದಲ್ಲ ಅದಲ್ಲ : ರೂಪ ಹಾಸನ ಅವರ ಕವಿತೆ

ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳುಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನಕವಿತೆಗಳೂ ಇಲ್ಲಿರುತ್ತವೆ....

ಅಮೆರಿಕಾದಲ್ಲಿದ್ದೂ ಅಜ್ಞಾತವಾಗಿದ್ದ ಸ್ಯಾಲಿಂಜರ್

ಸ್ಯಾಲಿಂಜರ್ ಬರೆದ ಕಾದಂಬರಿ 'ಕ್ಯಾಚರ್ ಇನ್ ದ ರೈ'ಯ 64 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ. ಪ್ರತಿವರ್ಷ 2,50,000 ಜನ ಈ ಕಾದಂಬರಿಯನ್ನು ಕೊಳ್ಳುತ್ತಾರೆ. ಅತ್ಯಂತ ಹೆಚ್ಚ ಜನ ಓದಬಯಸುವ ಮತ್ತು ಅತ್ಯಂತ ಹೆಚ್ಚು ಜನ ನಿಷೇಧಿಸಬಯಸುವ ಅಮೇರಿಕನ್ ಕಾದಂಬರಿ ಇದಾಗಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ಇದು ಇಂಗ್ಲಿಷ್ ಭಾಷೆಯ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ.

ಈ ಎಲ್ಲಾ...

ಬಕಾಲದ ಮೌನಿ ಸಿದ್ದಯ್ಯ ಮಾತನಾಡಿದಾಗ : ಬಸವರಾಜು ಬರಹ

ಆಧುನಿಕ ಕನ್ನಡ ಕಾವ್ಯ ಪರಂಪರೆಯಲ್ಲಿ ಅಧ್ಯಾತ್ಮವನ್ನು ವಿವಿಧ ನೆಲೆಗಳಲ್ಲಿ ಶೋಧಿಸುತ್ತಿರುವ ಕೆ.ಬಿ.ಸಿದ್ದಯ್ಯನವರು ಗಂಭೀರ ಓದುಗ ಮತ್ತು ಮೌನಿ. ತಮ್ಮ ಪಾಡಿಗೆ ತಾವು- ತಮ್ಮಿಷ್ಟದ ಹಾದಿಯಲ್ಲಿ ಅಡ್ಡಾಡಲು ಹಾತೊರೆವ ಭಾವಜೀವಿ. ದಲಿತ ಮತ್ತು ರೈತ ಚಳುವಳಿಗಳನ್ನು ಭಾವನಾತ್ಮಕವಾಗಿ ಮತ್ತು ತಾತ್ವಿಕವಾಗಿ ಬೆಸೆಯಬಯಸಿದವರು. ಬಕಾಲ, ದಕ್ಲಕಥಾದೇವಿ ಕಾವ್ಯ,...

 
 ಖೇಣಿ ಪುರಾಣ-೪ : ಬೀದರಿಗೆ ಮದುಮಗನಂತೆ ಬಂದರು

ಪತ್ರಿಕೆಗಳಲ್ಲಿ ನೈಸ್ ನ ಅಶೋಕ ಖೇಣಿ ಬೀದರಿನ ರಂಜೋಳದವರು ಎಂಬ ಸುದ್ದಿ ಕೆಲವರಲ್ಲಿ ಸಂಚಲನ ಉಂಟು ಮಾಡಿತು. ಹೀಗೆ ಉಂಟಾದ ಸಂಚಲನ ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಲಿಲ್ಲ. ಕೆಲವರು ಫೋನ್ ಮಾಡಿ 'ಅಶೋಕ ಖೇಣಿ ಅವರ ನಂಬರ್ ಪ್ಲೀಸ್' ಎಂದು ಕೇಳಲು ಹಿಂದೇಟು ಹಾಕಲಿಲ್ಲ. ಹಾಗೆ ಫೋನಾಯಿಸಿದವರಿಗೆಲ್ಲ ನಂಬರ್ ಕೊಡುವುದು ಸಾಧ್ಯವಿರಲಿಲ್ಲ ಹಾಗೆಯೇ ಸಾಧುವೂ ಅಲ್ಲ ಎಂಬುದು ಗೊತ್ತಿತ್ತು. ಆದರೆ, ವರ್ಚಸ್ಸಿರುವ ದೊಡ್ಡಜನ ಕೇಳಿದರೆ ಇಲ್ಲ ಎನ್ನಲು ಹೇಗಾಗುತ್ತದೆ. ಹೀಗೆ ದೂರವಾಣಿ ಸಂಖ್ಯೆ ಕೇಳಿದವರ ಪೈಕಿ ನಂಬರ್ ಪಡೆಯುವಲ್ಲಿ ಯಶಸ್ವಿಯಾದ ಏಕಮಾತ್ರ ವ್ಯಕ್ತಿ ಗುಲ್ಬರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ. 'ನಿನಗ್ಯಾಕೆ ಖೇಣಿ ನಂಬರ್?' ಪ್ರಶ್ನೆಗೆ 'ಅದೆಲ್ಲ ನಿನಗ್ಯಾಕೆ. ನಂಬರ್ ಕೇಳಿದ್ದೀನಿ ಕೊಡು. ನಿನ್ನ ಹತ್ತಿರ ಇಲ್ಲದಿದ್ದರೆ ಯಾರ ಹತ್ತಿರ ಕೇಳಬೇಕು? ಹೇಳು' ಎಂದು ದುಂಬಾಲು ಬಿದ್ದ. ಅವ ಸುಲಭದ ಪೆಟ್ಟಿಗೆ ಬಿಟ್ಟುಕೊಡುವ ಆಸಾಮಿಯಲ್ಲ. ಉಡದ ಹಿಡಿತದ ಹಾಗೆ. ಪಟ್ಟು ಹಾಕಿದರೆ ಸಡಲಿಸುವುದು ಸುಲಭವಲ್ಲ. ಕಾರಣ ಹೇಳದೇ ನೈಸ್ ಕಂಪೆನಿಯ ದೂರವಾಣಿ ಸಂಖ್ಯೆ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದ. ಅದಾದ 15 ದಿನಗಳ ನಂತರ ನೈಸ್-ದೇವೇಗೌಡರ ಕದನ ಸ್ವಲ್ಪ ತಣ್ಣಗಾಯಿತು. ಮತ್ತಾವುದೇ ಸುದ್ದಿ ಮುಂಚೂಣಿಗೆ ಬಂದದ್ದರಿಂದ 'ನೈಸ್' ಹಿಂದೆ ಸರಿಯಿತು.

ಬೀದರಿನಂತಹ ಊರಿನಲ್ಲಿ ಸುದ್ದಿಗಳು ತಾನಾಗಿ ಸಿಗುವುದಿಲ್ಲ. ಹುಡುಕಿಕೊಂಡು ಹೋಗಬೇಕು. ನಗರದಿಂದ ನಾಲ್ಕು ಹೆಜ್ಜೆ ಹೊರ ಹಾಕಿದರೆ ಹಾದಿಬೀದಿಗುಂಟ ಬಿದ್ದಿರುವ ಸುದ್ದಿಗಳು 'ನನ್ನ ಮೇಲೆತ್ತಿಕೋ' ಎಂದು ಗೋಗರೆಯಲು ಆರಂಭಿಸುತ್ತವೆ. ಅವುಗಳ ನಡುವೆ ಪೈಪೋಟಿ ಎಷ್ಟೊಂದು ಜೋರಾಗಿರುತ್ತದೆ ಎಂದರೆ ಕೆಲವೇ ಕಿ.ಮೀ. ಕ್ರಮಿಸಿದ ನಂತರ 'ಪ್ರಮುಖ' ಎನ್ನುವ ನಾಲ್ಕೈದು ಸುದ್ದಿ ಸಿಕ್ಕ ನಂತರ ಮರಳಿ ಅವುಗಳನ್ನು ಫೈಲ್ ಮಾಡಬೇಕು ಎನ್ನಿಸತೊಡಗುತ್ತದೆ. ಇದು ಸುದ್ದಿ ಹುಡುಕುವ ಪ್ರಮುಖ ಕ್ರಮ. ಆದರೆ...

Font Help
Site Web
ಜನಮತ
ಬಂಗಾಳ ಎಂದರೆ ನನಗೆ ನೆನಪಾಗುವುದು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige