ಜುಲೈ ೪, ೨೦೦೯
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಅಪ್ಪ ಅದೆಷ್ಟೋ ವರ್ಷಗಳವರೆಗೆ ಹಾಸಿಗೆ ಹಿಡಿದಿತ್ತು. ಅವ್ವನಿಗೆ ಸೊಂಟ ನೋವು ಬಿಟ್ಟರೆ ಬೇರೆ ಕಾಯಿಲೆ ವಿರಳಾತಿ ವಿರಳ. ಅಕ್ಕ ಸೆಣಕಲು ಶರೀರದವಳು. ಶೀತ, ಕೆಮ್ಮು, ಜ್ವರ ಬಂದುದು ಗೊತ್ತೇ ಇಲ್ಲ. ಆದರೆ ನನ್ನದು ಹಾಗಲ್ಲ. ಶೀತ, ಕೆಮ್ಮು, ಗಂಟಲು ನೋವು, ಜ್ವರ, ತಲೆನೋವು, ಅಷ್ಟೇ ಅಲ್ಲ, ಮೂಗಿನಲ್ಲಿ ರಕ್ತಸ್ರಾವ! ವರ್ಷದಲ್ಲಿ ಒಂದೆರಡು ಬಾರಿ ಏನಾದರೊಂದು ಇದ್ದೇ ಇರುತಿತ್ತು.ಕೆಲವೊಮ್ಮೆ ಶಾಲೆಯಲ್ಲೆ ಮೈಕೈ ನೋವು ಶುರುವಾಗಿ ಜ್ವರದಿಂದ ನರಳಿದ್ದೇನೆ. ಜ್ವರ ಬಂತೆಂದರೆ ಮಧ್ಯಾಹ್ನ ಊಟ ಬೇಡವೇ ಬೇಡ. ಹಾಗೆಂದು ರಜೆ ಕೇಳಿ ಬೇಗನೆ ಮನೆಗೆ ಬಂದುದಾಗಲಿ, ಯಾಕಪ್ಪಾ ಸಪ್ಪೆಗಿದ್ದೀಯಾ ಅಂತ ಕೇಳಿದ್ದಾಗಲಿ ಇಲ್ಲ. ಸಂಜೆವರೆಗೂ ನರಳಿ, ಶಾಲೆ ಬಿಟ್ಟ ಬಳಿಕ ನಡಿಗೆ ಆರಂಭವಾಯಿತೆಂದರೆ, ಕಾಡು ಹಾದಿಯ ಸವೆಸಿ ಮನೆ ತಲುಪುವವರೆಗೆ ಅಕ್ಕನ ಗೋಳು. ನನ್ನ ಹೊರೆ ಪೂರ್ತಿ ಅವಳ ಹೆಗಲಿಗೆ. ಹಿಂದೆಲ್ಲಾ ಮನೆ ತಲುಪಿದೊಡನೆ ಕೈಕಾಲು ತೊಳೆದು ಏನಾದರೂ ತಿಂದು ವಿರಮಿಸುತ್ತಿದ್ದೆವು. ನಾನಂತೂ ಹಲಸಿನ ಮರದೆಡೆಗೋ ಮಾವಿನ ಮರದೆಡೆಗೊ ಓಡಿ ಮರಹತ್ತಿ ಹಣ್ಣಿನ ಬೇಟೆಯಾಡುತ್ತಿದ್ದೆ. ಜ್ವರ ಬಂದಾಗ? ಕೈಕಾಲು ತೊಳೆದ ಶಾಸ್ತ್ರವೂ ಬೇಡ ಏನೂ ಬೇಡ. ಒಮ್ಮೆ ಮಲಗಿದರೆ ಸಾಕು ಎಂದು ಮಲಗಿ ಬಿಡುತ್ತಿದ್ದೆ. ನಂತರ ಬಲವಂತಕ್ಕೆ ಅನ್ನಕ್ಕೆ ಹಾಲು ಹಾಕಿಕೊಂಡು ಒಂದೆರಡು ಬಾಯಿ ಊಟ ಮಾಡಿ ಮಲಗಿದ್ದೇನೆ. ನನಗೆ ಜ್ವರ ಎಂದು ತಿಳಿದ ಅಪ್ಪ ಮೆಲ್ಲನೆ ಎದ್ದು ಕಾಸನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಸೂರಿಗೆ ಹರಕೆ ಕಟ್ಟುತ್ತಿತ್ತು. ಏನೇ ಕಷ್ಟ ಬಂದರೂ ಅಪ್ಪ ಮಾಡುವ ಮೊದಲ ಕೆಲಸವೇ ಅದು. ಹಾಗಾಗಿ ಸೂರಿನ ಮರ ಬಿಳಿಬಟ್ಟೆಯ...

 ಯೋಗೀಂದ್ರ ಕಾಲಂ: ವಿಮಾನ ಡೈರಿಯ ಪುಟಗಳು
ವಿಮಾನದ ರೆಕ್ಕೆ ತಯಾರಿಸುವ ಘಟಕ ಇದು. ಇಂಗ್ಲೆಂಡಿನಲ್ಲಿ ವಿನ್ಯಾಸ ತಯಾರಿ ನಡೆದು ‘Airbus’ ಕಂಪೆನಿಯ ಪ್ರತಿ ವಿಮಾನದ ಎರಡು ರೆಕ್ಕೆಗಳನ್ನು  ಫ್ರಾನ್ಸಿಗೆ  ಸಾಗಿಸಿ ಇತರ ಭಾಗಗಳಿಗೆ ಜೋಡಿಸಲಾಗುತ್ತದೆ. ಇತರ ಭಾಗಗಳು ಜರ್ಮನಿ , ಸ್ಪೇನ್ ಮತ್ತು ಫ್ರಾನ್ಸ್ ಗಳಲ್ಲಿ ತಯಾರಿಸಲ್ಪಡುತ್ತವೆ. ಹೊರಗುತ್ತಿಗೆ ಮಾಡಲ್ಪಟ್ಟ ಕೆಲಸಗಳು ಯುರೋಪಿನ ಹೊರಗೆ, ಚೀನಾ, ಭಾರತ, ಮೆಕ್ಸಿಕೋ, ಮಲೇಶಿಯಾ ಇನ್ನಿತರ ದೇಶಗಳಲ್ಲಿ ನಡೆಯುತ್ತದೆ. ಒಂದು ವಿಮಾನ ಸಿದ್ಧವಾಗಲು ನೂರಾರು ದೇಶದ ಲಕ್ಷಾಂತರ ಜನರು ದುಡಿಯುತ್ತಾರೆ. ಅದಕ್ಕಿಂತ ಹೆಚ್ಚು ಜನರು ದಿನವೂ  ವಿಮಾನವನ್ನು ಬಳಸುತ್ತಾರೆ. ಈ ಬಳಕೆ ಬೇಡಿಕೆ ದಿನ ದಿನಕ್ಕೆ ಹೆಚ್ಚುತ್ತಿದೆ. ನಾಗರಿಕ ವಿಮಾನಯಾನ ಮಾರುಕಟ್ಟೆಯ ದೊಡ್ಡ ಪಾಲುಗಳು ಅಮೆರಿಕಾದ Boeing ಮತ್ತು ಯುರೋಪಿನ Airbus ಗಳ ನಡುವೆ ಹಂಚಿ ಹೋಗಿದೆ. ಕಳೆದ ಕೆಲವು ವರುಷಗಳಿಂದ ಈ ಕಂಪೆನಿಗಳು ತಲಾ ಐದುನೂರಂತೆ ಒಟ್ಟು ಒಂದು ಸಾವಿರ ಹೊಸ ವಿಮಾನಗಳನ್ನು ಪ್ರತಿವರ್ಷವೂ ಮಾರುಕಟ್ಟೆಗೆ  ನೀಡುತ್ತಿವೆ. ಇವು ದೊಡ್ಡ ವಿಮಾನಗಳು ಅಂದರೆ ನೂರಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ವಿಮಾನಗಳು. ಇನ್ನು ಸಣ್ಣ ಪುಟ್ಟ ವಿಮಾನಗಳ ಲೆಕ್ಕ ಬೇರೆ ಇದೆ. ಒಂದು ವಿಮಾನ ಅಂದಾಜು ಇಪ್ಪತ್ತೈದು ವರುಷಗಳ ಕಾಲ ಸೇವೆ ಸಲ್ಲಿಸುತ್ತದೆ -ನಿಯಮಿತವಾದ...
 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ಅತಿಥಿ ಸಂಪಾದಕರ ಐಡಿಯಾಕ್ಕೆ ಪ್ರತಿಭಾ ಜವಾಬು

ಕೆಂಡಸಂಪಿಗೆಯ ಅತಿಥಿ ಸಂಪಾದಕರ ಈ ವಾರದ ಐಡಿಯಾಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ಜೊತೆಗೆ ಕವಯಿತ್ರಿ ಪ್ರತಿಭಾ ನಂದಕುಮಾರ್ ಪ್ರೀತಿಯಿಂದ ಈ ಕವಿತೆಯನ್ನು ಅನುವಾದಿಸಿಯೂ ಕಳಿಸಿದ್ದಾರೆ. ‘ಈ ಕವಿತೆಯ ಅನೇಕ ಭಾಷಾಂತರಗಳು ಸಾಧ್ಯವಿದೆ. ಇಲ್ಲಿ ಒಂದು ಸಾಧ್ಯತೆಯನ್ನು ಕಳುಹಿಸಿದ್ದೇನೆ’ ಎಂದು ನಮ್ರವಾಗಿ ನುಡಿದಿದ್ದಾರೆ....

ಮೀರಾ ಕಾಲಂ: ಈ ಸಮಯಕ್ಕಾಗಿ ಬರೆದ ಕವಿತೆ

‘ಇರಾನಿನ ಸಿಂಹಿಣಿ’ ಎಂದು ತನ್ನ ಜನರಿಂದ ಕರೆಸಿಕೊಂಡ ಇರಾನಿ ಕವಿ, ಸಿಮಿನ್ ಬೆಹ್‍ಬಹಾನಿ ತನ್ನ ನಾಡಲ್ಲಿ ಸಂಭವಿಸುತ್ತಿರುವ ಹಿಂಸೆ, ವಿಪ್ಲವಗಳನ್ನು ಕಂಡು ನೊಂದು, ಕೋಪಗೊಂಡು ಇತ್ತೀಚೆಗೆ ಒಂದು ಕವಿತೆ ಬರೆದಿದ್ದಾರೆ. ‘ಸ್ವಾತಂತ್ರ್ಯದ ಸಲುವಾಗಿ ಮಾಡುತ್ತಿರುವ ಈ ಹೋರಾಟ ಯಾವ ಕಾರಣಕ್ಕೂ ನಿಲ್ಲಿಸದಿರಿ’ ಎಂದು ತನ್ನ ದೇಶಬಾಂಧವರಿಗೆಲ್ಲ ಕರೆ...

ಪೆಜತ್ತಾಯ ಆತ್ಮಕಥೆ: ಗೆಳೆಯ ತಿಮ್ಮೇಗೌಡ

ತಿಮ್ಮೇಗೌಡರು ನನ್ನ ಅತೀ ಸನಿಹದ ನೆರೆಹೊರೆಯ ಹಿರಿಯ ಮಿತ್ರ. ಪಶ್ಚಿಮ ದಿಕ್ಕಿನಲ್ಲಿ ನಮ್ಮ ಜಮೀನಿಗೆ ಹೊಂದಿಕೊಂಡೇ ಅವರ ಜಮೀನು ಇದೆ. ನಮ್ಮಿಬ್ಬರಿಗೂ ಪಶ್ಚಿಮದಲ್ಲಿ ಭದ್ರಾ ನದಿಯೇ ಸರಹದ್ದು. ತಿಮ್ಮೇ ಗೌಡರು ನನ್ನ ಆತ್ಮೀಯ ಗೆಳೆಯರು. " ನಮಗೆ ಈ ಗಾಢವಾದ ಮೈತ್ರಿ ಹೇಗೆ ಉಂಟಾಯಿತು? " ಎಂದು ಊರವರೆಲ್ಲಾ ಆಶ್ಚರ್ಯ ಪಡುತ್ತಿದ್ದರು. ಹೊರ ನೋಟಕ್ಕೆ ನಮ್ಮಿಬ್ಬರಲ್ಲಿ...

 
 ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ

ಸಾವು ಹೇಗಿರುತ್ತದೆಯೋ ಗೊತ್ತಿಲ್ಲ. ಆದರೆ ಸಾವು ಎಂಬ ಸುಳಿಗೆ ಸಿಕ್ಕಿಹಾಕಿಕೊಂಡು ನಂತರ ಬದುಕಿ ಉಳಿಯುವುದು ಬಹಳ ಅಪರೂಪ. ಇಂತಹ ಒಂದು ಸುಳಿಗೆ ನಾನು ಕೂಡ ಒಮ್ಮೆ ಸಿಕ್ಕಿಹಾಕಿಕೊಂಡಿದ್ದೆ. ಹೇಗೆ ಎನ್ನುವಿರಾ?೨೦೦೭ ರ ಮೇ ತಿಂಗಳಲ್ಲಿ ನಾನು ಮತ್ತು ಇನ್ನೂ ಎಂಟು ಜನ ನಮ್ಮ ಮನೆಯವರು ಹಿಮಾಲಯ ಟ್ರೆಕಿಂಗ್ ಅಂತ ಹೋಗಿದ್ದೆವು. ಹಿಮಾಲಯ ಅಂದರೆ ಉತ್ತರಾಖಂಡದಲ್ಲಿರುವ ಕೇದಾರಕಂಠ ಪರ್ವತ. ಮೊದಲು ದೂರದಿಂದ ಹಿಮವನ್ನು ನೋಡಿದಾಗ ಖುಷಿಯೋ ಖುಷಿ. ಆದರೆ ಇದೇ ಹಿಮ ಮುಂದೆ ಸ್ವಲ್ಪ ತೊಂದರೆಯನ್ನು ಕೊಡುತ್ತದೆ ಅಂತ ನಾನಂತು ಎಂದೂ ಅಂದುಕೊಂಡಿರಲಿಲ್ಲ.ಟ್ರೆಕಿಂಗ್‌ನಲ್ಲಿ ಸುಮಾರು ೪ ರಿಂದ ೫ ಕಿ.ಮೀ. ವರೆಗೆ ಹಿಮದ ಮೇಲೆ ನಡೆಯಬೇಕೆಂದು ಕೇಳಿದಾಗ ಎಲ್ಲಿಲ್ಲದ ಉತ್ಸಾಹ. ಆದರೆ ೭೦ ಡಿಗ್ರಿ ಇಳಿಜಾರಿನಲ್ಲಿದ್ದ ಪರ್ವತದ ಮೇಲೆ ನಡೆಯಬೇಕು ಎಂದು ನೋಡಿದಾಗ ಮೈಯೆಲ್ಲಾ ನಡುಗತೊಡಗಿತು. ನಮಗಿಂತ ಮುಂಚೆ ಹೋಗಿದ್ದ ಒಂದು ತಂಡದವರು ಯಾವ ಕಷ್ಟವೂ ಬರದೇ ಸುಲಭವಾಗಿ ಹೋಗಿಬಂದರು. ಆದರೂ ಹಿಮದಲ್ಲಿ ನಡೆಯುವಾಗ ಜಾರುವುದು, ಈ ತರಹದ ತಮ್ಮಿಂದಲೇ ಆಗಬಹುದಾದ ತೊಂದರೆಗಳು ಉಂಟಾಗಬಹುದು. ಇದೇ ವಿಶ್ವಾಸದಿಂದ ಇದ್ದಾಗ ನಮಗೂ ಆ ದಿನ ಬಂದೇ ಬಿಟ್ಟಿತು. ಆ ದಿನವಂತೂ ಪ್ರಚಂಡ ಬಿರುಗಾಳಿ. ಹಿಂದಿನ ದಿನದಂದು ಬಿದ್ದಿದ್ದ ಆಲಿಕಲ್ಲಿನ ಮಳೆ ಈ ದಿನವೂ ಶುರುವಾಗಿತ್ತು. ವಿಶೇಷವೆಂದರೆ, ಪರ್ವತ ಬಹಳಷ್ಟು ಎತ್ತರ ಇದ್ದುದ್ದರಿಂದ ಮಳೆ ನೀರಿನ ರೂಪದಲ್ಲಿ ಬರುತ್ತಿರಲಿಲ್ಲ. ಅದೇ ಮಳೆ ಬರೀ ಅಲಿಕಲ್ಲಿನ ರೂಪದಲ್ಲಿ ಬರುತ್ತಿತ್ತು. ಇದರಿಂದ ನಮಗೆಲ್ಲಾ ಭಯ, ಮಾರ್ಗದರ್ಶಕರೇನೋ ಇದ್ದರು, ಆದರೆ ಪ್ರಕೃತಿಯ ನಿಯಮಕ್ಕೆ ವಿರುದ್ಧ ಹೋಗಬಹುದೇ?ಆಗ ನಮಗೆ ಮೂರು ಜನ ಮಾರ್ಗದರ್ಶಕರಿದ್ದರು. ಇನ್ನೇನು ಹೊರಡಬೇಕು ಎಂದಾಗ ಬಿರುಗಾಳಿ ಬರುವ ಸಂಭವವಿದೆ ಎಂದು ಅರಿತುಕೊಂಡ ಒಬ್ಬ ನಮ್ಮನ್ನು ಬಿಟ್ಟು ಹೋಗಿಬಿಟ್ಟ. ಇನ್ನು ಉಳಿದವರು ಇಬ್ಬರು. ನಮ್ಮ ತಂಡದಲ್ಲಿ ಕೇವಲ ಹನ್ನೊಂದೇ ಜನ. ಸದ್ಯ ನಮ್ಮ ಅದೃಷ್ಟ. ಮೂವರು...

Font Help
Site Web
ಜನಮತ
ತಿಂಗಳು ಬಿಟ್ಟು ತಿಂಗಳು ಕೆಂಡಸಂಪಿಗೆಗೆ ಅತಿಥಿ ಸಂಪಾದಕರು
 
 
Getting poll results. Please wait...
Sampige Feed
Sampige Katte