ಆಗಸ್ಟ್ ೮, ೨೦೦೮
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಸಿದ್ದಾಪುರ ಪೇಟೆಯ ಶಂಕರನ ಕೂದಲು ಕತ್ತರಿಸುವ ಅಂಗಡಿಯ ತುಂಬೆಲ್ಲ ನಾನಾ ದೇವರುಗಳ ಪಟಗಳೂ, ಗಾಂಧಿ, ನೆಹರೂ, ಇಂದಿರಾಗಾಂಧಿ, ಲಾಲ್ ಬಹದೂರ್ ಇವರೆಲ್ಲರ ಚಿತ್ರಗಳೂ, ಬಣ್ಣಬಣ್ಣದ ಹೂಗಳ ಚಿತ್ತಾರ ಬಿಡಿಸಿದ ಕನ್ನಡಿಗಳೂ ಹಾಗೂ ಬೆನ್ನ ಹಿಂದೆ ಕೂದಲು ಕತ್ತರಿಸುವವರಿಗೆ ಕನ್ನಡಿಯಲ್ಲಿ ಕಾಣಿಸುವ ಹಾಗೆ ನರಕದ ನಾನಾ ಶಿಕ್ಷೆಗಳಿರುವ ಪಟವೂ ಇತ್ತು. ಆ ಪಟದಲ್ಲಿ ನರಕದ ಯಮದೂತರು ತಪ್ಪು ಮಾಡಿದವರನ್ನು ಗರಗಸದಲ್ಲಿ ತುಂಡುತುಂಡುಗಳಾಗಿ ಕತ್ತರಿಸುತ್ತಲೂ, ಬೆಂಕಿಯ ಮೇಲಿಟ್ಟ ಬಾಣಲೆಗಳಲ್ಲಿ ಬೇಯಿಸುತ್ತಲೂ, ಅವರ ನಾಲಗೆಗಳನ್ನು ಎಳೆದು ಹಿಡಿದು ಶೂಲಗಳಲ್ಲಿ ಚುಚ್ಚುತ್ತಲೂ ಇರುತ್ತಿದ್ದರು. ಆ ಚಿತ್ರಪಟಗಳ ಮೇಲೆ ಗೂಡುಕಟ್ಟಿರುವ ಗುಬ್ಬಚ್ಚಿಗಳು ಸದಾ ಸದ್ದು ಮಾಡುತ್ತಾ, ಅತ್ತಿಂದಿತ್ತ ಹಾರಾಡುತ್ತಾ, ಹೊರಗಿನಿಂದ ಹುಲ್ಲುಕಡ್ಡಿಗಳನ್ನು ಕೊಕ್ಕಲ್ಲಿ ಹೆಕ್ಕಿ ತಂದು ಇನ್ನಷ್ಟು ಗೂಡುಗಳನ್ನು ಕಟ್ಟುತ್ತಾ, ಇರುವ ಗೂಡುಗಳನ್ನು ಬೀಳಿಸುತ್ತಾ ಯಾವಾಗಲೂ ಆ ಅಂಗಡಿಯಲ್ಲಿ ಚಟುವಟಿಕೆಯಲ್ಲಿ ಇರುವಂತೆ ಕಾಣಿಸುತ್ತಿದ್ದವು. ಶಂಕರನ ಸಾಕುತಂದೆ ಕುಂಞಂಬುವಿನ ಕಾಲದಿಂದಲೂ ಇದು ಹೀಗೇ ಇರುತ್ತಿತ್ತು. ತನ್ನ ಕ್ಷೌರಿಕ ಕೆಲಸವನ್ನು ಜಿಗುಪ್ಸೆಯಿಂದಲೇ ಮಾಡುತ್ತಿದ್ದ ಶಂಕರನು ಇದನ್ನೇನೂ ಸರಿಮಾಡಲು ಹೋಗದೆ ತನ್ನ ಪಾಡಿಗೆ ತಾನು ಕೂದಲು ಕತ್ತರಿಸುತ್ತಾ ಈ ಗುಬ್ಬಚ್ಚಿಗಳ ಜೊತೆ ತಾನೂ ಬದುಕುತ್ತಿದ್ದನು.ಬೆಳಗೆ ಕಂಕುಳಲ್ಲಿ ಮಲಯಾಳದ ಪತ್ರಿಕೆಯೊಂದನ್ನು ಇರುಕಿಸಿಕೊಂಡು ಬಂದಿದ್ದ ಸಣ್ಣ ಉಸ್ತಾದರು ಇಂದು ಸೂರ್ಯಗ್ರಹಣವಾಗುವುದೆಂದು ಹೇಳಿದ್ದರು. ಸೂರ್ಯಗ್ರಹಣದ...
 ಕುಂವೀ ಕಾಲಂ ಶುರು : ಹಲೋ ವಿಶ್ವಮಾನವರೇ
ಹಲೋ ವಿಶ್ವಮಾನವರೇ, ಯಾಕಂದೆ ಅಂತಂದ್ರೆ ಲ್ಯಾಪ್ ಟ್ಯಾಪ್, ಕಂಪ್ಯೂಟರ್ ಮುಂದೆ ಕೂತು ಜಾಗತಿಕ ವಿದ್ಯಮಾನ ಗ್ರಹಿಸುತ್ತಿರುವ ನೀವೆಲ್ಲರು ವಿಶ್ವಮಾನವರೇ. ನಾನು ನಿಮ್ಮ ಹಾಗೆ ವಿಶ್ವಮಾನವನಲ್ಲ. ಕಂಪ್ಯೂಟರ್‌ನ ಅಕ್ಷರಾಭ್ಯಾಸ ಮಾಡದಿರುವ ಕಾರಣಕ್ಕೆ ಆದರೂ ಲೇಖಕನಾಗಿರುವ ಕಾರಣಕ್ಕೆ ಪ್ರಪಂಚದ ಆಗು ಹೋಗುಗಳೆಲ್ಲವನ್ನೂ ಗ್ರಹಿಸಬಲ್ಲೆ. ದಯವಿಟ್ಟು ಅಹಂಕಾರವೆಂದು ಭಾವಿಸಬೇಡಿ, ಇದಕ್ಕೆ ಹತ್ತು ಹಲವು ಪುರಾವೆಗಳನ್ನು ಒದಗಿಸಬಲ್ಲೆ. ಆರಂಭಿಕ ಕಾದಂಬರಿ ಕಪ್ಪು ಬರೆದದ್ದೆ ಹುಂಬತನ ಮತ್ತು ಆತ್ಮವಿಶ್ವಾಸದಿಂದ. ನಾನು ನನ್ನ ಶಾಮಣ್ಣ ಎಂಬ ಬೃಹತ್ ಕಾದಂಬರಿಯನ್ನು ಕೇವಲ ೨೪ ದಿವಸಗಳಲ್ಲಿ ಬರೆದೆ ಎಂದು ಹೇಳಿದರೆ ನೀವು ನಂಬದೇ ಇರಬಹುದು. ಬೇಲಿ ಮತ್ತು ಹೊಲದಂಥ ಆರು ಕಾದಂಬರಿಗಳನ್ನು ನಾಲ್ಕೈದು ದಿವಸಗಳಲ್ಲೂ, ಕೆಲವು ಕಥೆಗಳನ್ನು ಒಂದೆರಡು ತಾಸುಗಳಲ್ಲೂ ಬರೆದು ಸೃಜನಶೀಲ ಸಾಹಸ ಮೆರೆದಿರುವುದೂ ಉಂಟು. ಹೀಗೆ ನಿರರ್ಗಳವಾಗಿ ಕಥೆ ಬರೆಯುವ ಕಲೆಯನ್ನು ಧಾರೆ ಎರೆದ ನಿಂಗಮ್ಮಜ್ಜಿ, ಸಿದ್ದಮ್ಮಜ್ಜಿ, ಹಂಪಮ್ಮಜ್ಜಿ, ಹಾಲಪ್ಪರಂಥ ಹಿರಿಯರನ್ನು ಮರೆಯುವುದುಂಟೆ? ಮರೆತು ಬದುಕುವುದುಂಟೆ; ಅದೆಲ್ಲ ಆಗದ ಮಾತು. ಈ ನಿರರ್ಗಳತೆ, ಸಲೀಸು ಇದರ ಅಪಾಯದ ಅರಿವು ನನಗಿಲ್ಲದೆ ಇಲ್ಲ. ಇದರ ಪರಿಣಾಮವಾಗಿಯೇ ಕೆಲವು ಒಳ್ಳೆಯ ಕಥೆಗಳು ಮತ್ತು...
 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ದಿನದ ಕವಿತೆ- ಕಪ್ಪು ಬೆಳ್ಳಿ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ...

ಆಸ್ಟ್ರೇಲಿಯಾ ಪತ್ರ - ಪಿಂಕ್ ಪ್ಯಾಂತರ್‍ ಹಾಗು ಒಂಟಿತನ
ಕೆಲಸದ ಬಳಿ ಟ್ರೈನ್ ಇಳಿದು ಉದ್ದದ ಸುರಂಗದ ಮೂಲಕ ನಡೆದು ಹೋಗಬೇಕು. ಸಿಡ್ನಿಯ ಹೈಡ್ ಪಾರ್ಕ್ ಅಡಿಯ ಆ ಒಳದಾರಿಯಲ್ಲಿ ದೂರದ ಮೆಟ್ಟಿಲ ಕಡೆ ನೋಡುತ್ತಾ ನಡೆಯುವುದು ಒಂದು ಚಂದದ ಅನುಭವ. ಒಂದೆರಡು ನಿಮಿಷ ಯಾವುದಾದರೂ ಸಂಗತಿಯ ಬಗ್ಗೆ ಮನಸ್ಸು ಧ್ಯಾನಸ್ಥವಾಗುತ್ತದೆ.ಅಲ್ಲಿ ಮತ್ತೊಂದು ವಿಶೇಷವೂ ಇದೆ. ದಿನಾಲೂ ಅಲ್ಲದಿದ್ದರೂ, ವಾರಕ್ಕೊಂದೆರಡು ದಿನ ಯಾರಾದರೂ ಅಲ್ಲಿ...
ಮುಂತಕಾ: ಫೋಟೋಗ್ರಾಫರ್‌ನೊಬ್ಬನ ಸಂಕಷ್ಟಗಳು

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಫೊಟೋಗ್ರಾಫರ್ ಮುಂತಕಾ ಅವರ ಚಲನವಲನಗಳು ಬದಲಾಗಿವೆ. ಹಾಗೆ ನೋಡಿದರೆ ಬೀದರ್ ಎಂಬ ಜಗತ್ತಿನಲ್ಲಿ ನಡೆಯುವ ಎಲ್ಲ ಸಣ್ಣಪುಟ್ಟ ಘಟನೆಗಳು ಮುಂತಕಾ ಮೇಲೆ ಪರಿಣಾಮ ಬೀರುತ್ತವೆ. ಹೊಸದಾಗಿ ನಗರಕ್ಕೆ ಬರುವ ಅಮೀನ್‌ಸಾಬ್ ಎಂದು ಕರೆಯುವ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ತಹಸೀಲ್ದಾರ್, ಎಸಿ ಮತ್ತು ಡಿಸಿ ಎಲ್ಲರೂ...

 
 ಲಂಬಾಣಿ ನೆನಪುಗಳು ೨೭- ಹೋಳಿ ಹಬ್ಬದ ಕಾರಣ

ಒಮ್ಮೆ ನಮ್ಮ ಮನೆಯಲ್ಲಿ ನನ್ನ ಚಿಕ್ಕಪ್ಪ ಶ೦ಕರ ಚವ್ಹಾಣನ ಮಗ ಶ್ರೀನಾಥನ ಹೋಳಿ ಹಬ್ಬಕ್ಕೆ ಕಾರಣ ಮಾಡುವ ದಿನ. ಶೀನಾಥನ ಕಾರಣ ಕಾರ್ಯಕ್ರಮಕ್ಕೆ ಅವನ ಅಜ್ಜ ಶಿವಲಾಲ ದೊಡ್ಡಮನಿ ಹಿಟ್ನಳ್ಳಿ ತಾ೦ಡೆಯಿ೦ದ ಬ೦ದಿದ್ದ. ಪೂರಿ ಕಾಯಿಸಲು ಮಧ್ಯ ವಯಸ್ಸಿನ ಈ ಶಿವಲಾಲ ಅಜ್ಜನಿಗೆ ಮತ್ತು ಅವರ ಶ್ರಿಮತಿ ಧಾನಿಬಾಯಿಗೆ ಒಪ್ಪಿಸಿದ್ದರು. ಇವರಿಬ್ಬರಿಗೆ ನನ್ನ ಕಾಕಿ ಬನಕಿಬಾಯಿ ಮಧ್ಯಾಹ್ನ ಒ೦ದು ಗ೦ಟೆಗೆ ಊಟ ಕೊಟ್ಟು ಜಗ್ಗಿ ನಿದ್ದೆ ಮಾಡಕೊಳ್ಳಿ, ಮತ್ತೆ ರಾತ್ರಿಯೆಲ್ಲಾ ಕೂತು ಪೂರಿ ಕಾಯಿಸಬೇಕು, ಮಧ್ಯದಲ್ಲಿ ಎದ್ದು ಬರೋ ಹಾಗಿಲ್ಲ, ನಿದ್ದೆ ಬ೦ದು ಪೂರಿ ಕಾಯಿಸುವ ಬದಲು ಕಡಾಯಿಯಲ್ಲಿ ಕುದಿತಿರುವ ಎಣ್ಣೆಯಲ್ಲಿ ಬಿದ್ದ ಸುಟ್ಟು ಹೋಗ ಬಿಟ್ರಿ ಅ೦ತೇಲ್ಲಾ ಹೇಳ್ತಾ ಜನರ ಗಲಾಟೆ ಇಲ್ಲದ ಖೋಲಿಯಲ್ಲಿ ಅವರಿಬ್ಬರಿಗೆ ಮಲಗುವ ವ್ಯವಸ್ಥೆ ಮಾಡಿ ಮಲಗಲು ಹೇಳಿ ಬ೦ದಿದ್ದಳು.

ನಮ್ಮ ತಾ೦ಡೆಯ ಹೋಳಿ ಹಬ್ಬ ಅ೦ದ್ರೆ ಶಿವಲಾಲ ಅಜ್ಜನಿಗೆ ತು೦ಬಾ ಇಷ್ಟ. ನಮ್ಮಲ್ಲಿ ಆಚರಿಸುವ ಹಾಗೆ ಅವರ ತಾ೦ಡೆಯಲ್ಲಿ ಇಲ್ಲವ೦ತೆ. ಈತ ಬಹಳ ಗಟ್ಟಿ ಮುಟ್ಟಾದ ಮನುಷ್ಯ. ನೋಡಲು ಸ೦ಭಾವಿತ, ಮಾತು ಕಡಿಮೆ ಆದ್ರೆ ತನ್ನ ಬಾಯಿಯಿ೦ದ ಸುರಿಯುವ ಒ೦ದೊ೦ದು ಮಾತಿನಲ್ಲಿ ಕೇಳುಗರಿಗೆ ನಗು ಬರುವ೦ತಿದ್ದವು. ಯಾವಾಗಲು ನಗು ಮುಖದಲ್ಲೆ ಇರ್ತಿದ್ದ. ಈ ಅಜ್ಜ ರಾತ್ರಿ ಹನ್ನೆರಡು ಗ೦ಟೆಗೆ ಪೂರಿ ಕಾಯಿಸಲು ಕೂತ. ಇದರ ಮೊದಲು ಮುಖಕ್ಕೆ ತಣ್ಣೀರು ಹಾಕಿ ತೊಳೆದು, ಒ೦ದು ಕಪ್ಪಿನಲ್ಲಿ ಬಿಸಿ ಬಿಸಿ ಚಹ ಕುಡಿದು, ಎದ್ದು ಅ೦ಗಳದಿ೦ದ ದೂರಕ್ಕೆ ಹೋಗಿ ಉಚ್ಚೆ ಮಾಡಿ, ಪೂರಿ ಕಾಯಿಸುವ ಒಲೆಯ ಹತ್ತಿರ ಬ೦ದು ಕೂತು ಕೊ೦ಡ. ಇತ್ತ ಅಜ್ಜಿ ಧಾನಿಬಾಯಿಯು ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ತನ್ನ ಬಟುವಾ (ಎಲೆ ಅಡಿಕೆ ಚೀಲ) ಸೊ೦ಟದಿ೦ದ ತಗೆದು ಎಲೆಗೆ ಸುಣ್ಣ ಹಚ್ಚಿ, ಒ೦ದು ಸಣ್ಣ ತು೦ಡು ಅಡಿಕೆ ಹಾಕಿ ಮಡಿಚಿ ಅಜ್ಜನಿಗೆ ಕೊಟ್ಟು ತಾನು ತಿ೦ದಳು. ಹೀಗೆ ಇವರಿಬ್ಬರು ಕೂತಲ್ಲೆ ಎಲೆ ಅಡಿಕೆ ತಿನ್ನುತ್ತಾ, ಮಧ್ಯ ಮಧ್ಯ ಚಹಾ ಕುಡಿಯುತ್ತಾ ಪೂರಿ...

Font Help
Site Web
ಜನಮತ
ಕೆಂಡಸಂಪಿಗೆಯ ವಿನ್ಯಾಸ ಮತ್ತು ಬಣ್ಣ
 
 
Getting poll results. Please wait...
Sampige Feed
Sampige Katte