ಜೂನ್ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಉತ್ತರ ಕರ್ನಾಟಕ ಪ್ರವಾಸ ಮಾಡುವಾಗ ಭಾಷೆ ವಿಷಯದಲ್ಲಿ ನನಗೊಂದು ವಿಚಿತ್ರ ಅನುಭವವಾಗುತ್ತದೆ. ನನ್ನೊಡನೆ ಮಾತಾಡುವಾಗ ಕೆಲವು ಹಳ್ಳಿಗರು ‘ನಿಮ್ಮದು ಬೆಂಗಳೂರು ಮೈಸೂರು ಕನ್ನಡ. ನೈಸು. ನಮ್ಮ ಭಾಷೆ ಬಿರುಸು’ ಎನ್ನುತ್ತಾರೆ. ಅವರು ಕನ್ನಡ ಮಾತಿನ ಎರಡು ಪ್ರಾದೇಶಿಕ ರೂಪಗಳ ಫರಕನ್ನೇನೊ  ಗುರುತಿಸುತ್ತಿದ್ದಾರೆ. ಆದರೆ, ಅವರಲ್ಲಿ ತಮ್ಮ ಮಾತಿನ ರೂಪದ ಬಗ್ಗೆ ತಪ್ಪೊಪ್ಪಿಗೆಯ ಅಥವಾ ಕೀಳರಿಮೆಯ ದನಿ ಇರುವುದೇಕೆ?

ಈ ತರತಮ ಪ್ರಜ್ಞೆ ಉತ್ತರ ಕರ್ನಾಟಕದವರಲ್ಲಿ ಮಾತ್ರವಲ್ಲ, ಪ್ರಾದೇಶಿಕ ರೂಪಭೇದವುಳ್ಳ ನಿರ್ದಿಷ್ಟ ಭಾಷೆಯನ್ನಾಡುವ ಎಲ್ಲ ಸಮುದಾಯಗಳಲ್ಲಿಯೂ ಕಾಣುವಂತಹುದು. ಲಖನೊವಿನ ಉರ್ದುವನ್ನೇ ಶ್ರೇಷ್ಠರೂಪವೆಂದು ನಂಬಿರುವ ಭಾರತದ ಉಳಿದ ಪ್ರಾಂತ್ಯಗಳ ಉರ್ದು ಭಾಷಿಕರಲ್ಲೂ ಈ ತರತಮಭಾವವಿದೆ. ‘ದಖನಿ’ ಎನಿಸಿಕೊಂಡಿರುವ ಹೈದರಾಬಾದ್ ಉರ್ದು, ಲಖನೊ ಉರ್ದುವಿನ ಮುಂದೆ, ಸಿರಿವಂತರ ಮದುವೆಗೆ ಬಂದಿರುವ ಬಡವರ ತರಹ ಮೈಕೈ ಮುದುಡಿಕೊಂಡಿರರಲು ಯತ್ನಿಸುತ್ತದೆ. ತೆಲಂಗಾಣ ಅಥವಾ ರಾಯಲುಸೀಮೆಯ ತೆಲುಗ ‘ಒರಟು’ ಎಂಬ ಧೋರಣೆ ವಿಜಯವಾಡಾ-ಗೋದಾವರಿ ಭಾಗದವರಲ್ಲಿದೆ. ತೆಲುಗು ಸಿನಿಮಾಗಳಲ್ಲಿ ಈಗಲೂ ಯಜಮಾನಿಕೆ ಮಾಡುತ್ತಿರುವುದು ಇದೇ ಕರಾವಳಿ ಆಂಧ್ರದ ‘ನೈಸು’ ತೆಲುಗೇ. ಈ ಸಿನಿಮಾಗಳು ತೆಲಂಗಾಣದ ನಟರನ್ನು ಇಟ್ಟುಕೊಂಡು ತೆಲಂಗಾಣದ ಹೃದಯಭಾಗದಲ್ಲಿರುವ ಹೈದರಾಬಾದ್ ಸ್ಟುಡಿಯೊಗಳಲ್ಲಿ ತಯಾರಾದರೂ ವಿಜಯವಾಡದ ಸಂಸ್ಕೃತ ಭೂಯಿಷ್ಠವಾದ ಉಚ್ಚಜಾತಿಗಳಾಡುವ ತೆಲುಗನ್ನೇ ಬಳಸುತ್ತವೆ; ತಮಿಳು ಮಲೆಯಾಳ ವಿಷಯದಲ್ಲಿಯೂ ಇಂತಹ ಪ್ರಾದೇಶಿಕ...

 ರೆವರೆಂಡ್ ಉತ್ತಂಗಿ ಚೆನ್ನಪ್ಪನವರು:ಅಪ್ಪಾಜಿರಾಯರ ಸರಣಿ

ಕನ್ನಡದ ಕೆಲಸ ಮೊದಲಾದುದೇ ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ. ಎಲ್ ರೈಸ್ ಮೊದಲಾದವರಿಂದ. ಅದೂ ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ. ಆದರೆ ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರೂ ಕೂಡಾ ಕ್ರೈಸ್ತಧರ್ಮ ಪ್ರಚಾರಕರಾದ ರೆವೆರೆಂಡ್ ಉತ್ತಂಗಿ ಚೆನ್ನಪ್ಪ. ಆದರೆ ಒಂದೇ ವ್ಯತ್ಯಾಸ ಹಿಂದಿನವರು ವಿದೇಶಿಯರಾದರೆ, ಇವರು ಅಪ್ಪಟ ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ಒಳಗಾಗಿದ್ದ ಸರ್ವಜ್ಞನ ವಚನಗಳಿಗೆ ಒಂದು ವ್ಯವಸ್ಥಿತ ರೂಪಕೊಟ್ಟು ವಚನ ಸಂಗ್ರಹವನ್ನು ಹೊರ ತಂದರು.

ರೆ.ಚೆನ್ನಪ್ಪ ೧೮೮೧ನೆಯ ಅಕ್ಟೋಬರ್ ೨೮ರಂದು ಧಾರವಾಡದಲ್ಲಿ ಜನಿಸಿದರು. ತಂದೆ ದಾನಿಯೇಲಪ್ಪ, ತಾಯಿ ಸುಭದ್ರಮ್ಮ.. ಅವರ ತಂದೆ ಅನಾಥಾಶ್ರಮದ ಮೇಲ್ವಿಚಾರಕರು ಹಾಗೂ ಶಿಕ್ಷಕರು. ಅವರ ಮೂಲಸ್ಥಳ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿರುವ ಉತ್ತಂಗಿ ಗ್ರಾಮ. ಅವರದು ಗೌಡರ ಮನೆತನ. ವೀರಶೈವ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ರಶೀದ್ ಅನುವಾದಿಸಿದ ಹಾಫಿಝನ ಕವಿತೆ

ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ...

ಗಡಸಿನ ಅಪ್ಪ, ಮಮತೆಯ ಅಪ್ಪ:ಸುಧೀಂದ್ರ ಬುಧ್ಯ ಬರಹ

ಮೊದಮೊದಲು ಅಪ್ಪ ಅಷ್ಟು ಸಲಿಗೆಗೆ ಸಿಕ್ಕವರಲ್ಲ, ಶಾಲಾ ದಿನಗಳಲ್ಲಿ ಅಪ್ಪ ಎಂದರೆ ಒಂದು ರೀತಿಯ ಭಯವೇ. ಮನೆಯಲ್ಲಿನ ಕೀಟಲೆ, ಅಕ್ಕಂದಿರೊಂದಿಗಿನ ಜಗಳ ಎಲ್ಲವೂ ನಿಲ್ಲುತ್ತಿದ್ದದ್ದು ಅಮ್ಮ ’ಅಪ್ಪನಿಗೆ ಹೇಳುತ್ತೀನಿ’ ಎಂದಾಗಲೇ. ಬಹುಶಃ ಎಲ್ಲ ಅಮ್ಮಂದಿರೂ ತಮ್ಮ ಮಕ್ಕಳನ್ನು ಹೆದರಿಸಲು ಬಳಸುವ ಪದವೇ ಅಪ್ಪ..! ಆದರೆ ಆ ಹೆದರಿಕೆಗೆ ಕಾರಣವೇ ಇರಲಿಲ್ಲ. ಎಂದಾದರೂ ಅಪ್ಪ...

ಅನುನಾಸಿಕ ಕಲಿಯುವ `ಸರ್ಕಸ್':ಮೂರನೇ ಕಿವಿ’ ಯ ಪುಟಗಳು ೪

ಅವನಿಗೆ ಒಂದು ಅಕ್ಷರ ಬಂತು ಎಂದ ತಕ್ಷಣ ಅದರಿಂದ ಆರಂಭವಾಗುವ ಶಬ್ದಗಳನ್ನು ಕಲಿಸುವುದು, ಅದನ್ನು ಬರೆಸುವುದು ಮತ್ತು ಓದಿಸುವುದು ನಡೆಯುತ್ತಲೇ ಇತ್ತು. ಓದು, ಬರಹ, ಕುಣಿತ, ಅಭಿನಯ ಎಲ್ಲವನ್ನೂ ಬಳಸಿಕೊಂಡು ಅಂತೂ ಇಂತೂ ನಿರಂಜನನಿಗೆ ಕ, ಖ, ಗ, ಘ ಕಲಿಸಲಾಯಿತು. `ಙ' ಕಲಿಸುವಾಗ ಮತ್ತೆ ನಮ್ಮ ಸರ್ಕಸ್ ಆರಂಭವಾಯಿತು.

`ಙ' ಅಕ್ಷರದ ಮಜಬೂತೇ ಬೇರೆ. ಇದನ್ನು ಶಬ್ದ (ಸೌಂಡ್)...

 
 ನಿನ್ನೆ ಅಪ್ಪಂದಿರ ದಿನ ಇಂದು ಪ್ರಶಸ್ತಿ ಮಾಡುವ ಅಪ್ಪನ ನಮನ

ಅಪ್ಪಂದಿರ ದಿನದಂದು ಎಲ್ಲಾ ಅಪ್ಪಂದಿರಿಗೂ ಒಂದು ನಮನ.. .. ಅಪ್ಪ-ಅಮ್ಮ ಎಲ್ಲಾ ಆದ ಅಪ್ಪಂದಿರಿಗೂ, ಅಮ್ಮ-ಅಪ್ಪ ಎಲ್ಲಾ ಆದ ಅಮ್ಮಂದಿರಿಗೂ ಒಂದು ನಮನ..ಯಾಕೋ ಕಾಣೆ. ಅಪ್ಪ ಅಂದ್ರೆ ಅದೇನೋ ಪ್ರೀತಿ. ಕೇಳಿದಾಗ ಹಣ ಕೊಡ್ತಾರೆ ಅಂತಲಾ, ಬೈಯ್ಯೋ ಅಮ್ಮನಿಂದ ಬಚಾವ್ ಮಾಡ್ತಾರೆ ಅಂತಲಾ, ಔಷಧಿ ಕಹಿಯಾದ್ರೂ ಆರೋಗ್ಯಕ್ಕೆ ಸಿಹಿಯಾಗಿರೋ ತರ ಪ್ರತೀ ಬೈಯ್ಗುಳದ ಹಿಂದೆ ಇರುವ ಸದುದ್ದೇಶಗಳ ಕಾರಣದಿಂದ್ಲಾ ? .. ಗೊತ್ತಿಲ್ಲ.. ಯಾಕೋ ಇಷ್ಟ ಆಗ್ಬುಡ್ತಾರೆ. ಎಲ್ಲಾ ಇಷ್ಟಗಳಿಗೂ ಕಾರಣ ಇರಲೇಬೇಕೆಂದೇನಿಲ್ಲವಲ್ಲ..  

ಇವತ್ತು ಸಾಹಿತ್ಯ ರಸಧಾರಾದ ಆಶುಕವಿತೆಯಲ್ಲಿ ನನಗೆ ಬಂದ ವಿಷಯ ಅಪ್ಪನ ಪ್ರೀತಿ. ಆ ಕ್ಷಣಕ್ಕೆ ತೋಚಿದ ಸಾಲುಗಳಿಷ್ಟೇ.

ಹೇಗೆ ಹೇಳಲಿ ಅಪ್ಪನಿನ್ನ ಪ್ರೀತಿಯ ರೀತಿಬೆನ್ನ ಮೇಲೆನ್ನ ನೀಹೊತ್ತು ತಿರುಗಿದ ವೀಥಿ

ಸ್ವತಃ ಮುಳುಗಿದ್ದರೂ ಕಷ್ಟಸಾಗರದಲ್ಲಿತೊಟ್ಟೂ ನೆನೆಯದಂತೆ ನನ್ನೆತ್ತಿದ ಪರಿತೃಣ ಕಷ್ಟವನ್ನೂ ನೀಡದಾ ಪರಿ....

ಛೇ.. ಅಷ್ಟರಲ್ಲೇ ಮೂರು ನಿಮಿಷದ ಟೈಮಾಯ್ತು .ಬರ್ಯಕ್ಕಾಗಿದ್ದು ಇಷ್ಟೇನಾ ಅಪ್ಪನ ಬಗ್ಗೆ ಅಂತ ಅನಿಸಿ ಬಹಳ ಬೇಜಾರಾಯ್ತು.. ಕವನವಾಗಿರಲಿಲ್ಲವದು. ಪ್ರಯತ್ನ ಪ್ರಾಮಾಣಿಕವಾಗಿದ್ರೂ ಪರೀಕ್ಷೆಯಲ್ಲಿ ಫೇಲಾದ ಹುಡುಗನಂತೆ.. ಆ ಸ್ಪರ್ಧೆಯ ಮತ್ತೊಂದು ನಿಯಮಾವಳಿಯಂತೆ. ಮೂರು ನಿಮಿಷದಲ್ಲಿ ನಾವು ಬರೆದ ಕವನಗಳನ್ನ ವಾಚಿಸಬಹುದು.. ಆಗ ಹೊಳೆದದ್ದು ಅಪ್ಪನ ಬಗ್ಗೆಯೇ ಬರೆದ ಕವನ

ಅಕ್ಷರವಾಗಿಹ ಭಾವಗಳಲ್ಲಿನೋವುಗಳೆಲ್ಲಾ ನಕ್ಕಿಹುದುತನ್ನನೆ ನುಂಗಿದ ನಿನ್ನೆಯ ನಡುವೆನಾಳೆ ಆಸೆ ತಲೆ ಎತ್ತಿಹುದು |೧

ಬೊಗಸೆಗೆ ಸಿಗದ ನೆನಪಿನ ಬಿಂದುಸಾಗರವಾಗಿ ಉಕ್ಕಿಹುದುತನ್ನನೆ ತೇದ ತಂದೆಯ ನೆನಪುಕಂಗಳಂಗಳದಿ ಬಿಕ್ಕಿಹುದು |೨

ಮರೆತಿಹ ನಿನ್ನೆಯ ಮರೆಯದ ಕನಸುಚುಚ್ಚಿ ಕೊಲ್ಲುವುದು ಅನವರತಕಾದಿಹೆ ನೀನು ಕಷ್ಟದ ವರ್ಷವತಾಳ್ಮೆಯ ಶರಧಿಯ ಬತ್ತಿಸುತ |೩

ಕಾಲದ ಬಿಸಿಲಿಗೆ ಸುಟ್ಟಿಹ ಗಾಯನಿನ್ನ ಅಗಲುವಿಕೆ ಮರೆಯುವುದೆ ?ಮಾತ ಹಿಂದಿನ ಅವಿತಿಹ...

Font Help
Site Web
ಜನಮತ
‘ಅನಿವಾಸಿ’ ಕನ್ನಡ ಬರಹಗಾರರು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige